ಉಜರೆ ಬಾಲಕ ಅಪಹರಣದಲ್ಲಿ ಮಂಡ್ಯ ಇಬ್ಬರು ಯುವಕರೂ ಸೇರಿ 21 ರಿಂದ 26 ವರ್ಷದೊಳಗಿ ತಂಡ 7 ಲಕ್ಷ ರು ಸುಫಾರಿ ಪಡೆದು ಅಪಹರಣ ಮಾಡಿತ್ತು ಎಂಬ ಸಂಗತಿ ಬಯಲಾಗಿದೆ
ಮಂಡ್ಯ ದ ರಂಜಿತ್( 21) ಹನುಮಂತ್ (22) ಮೈಸೂರಿನ ಗಂಗಾಧರ್ (25) ಬೆಂಗಳೂರಿನ ಕಮಲ್(23) ಅವರುಗಳು ಮಂಜುನಾಥ್ ( 25) ಎಂಬುವವರ ನೆರವಿನಿಂದ ಅಪಹರಣ ಮಾಡಿ ಕೋಲಾರದ ಮಹೇಶ್( 26) ಎಂಬಾತನ ಮನೆಯಲ್ಲಿ ಮಗುವನ್ನು ಬಚ್ಚಿ ಇಟ್ಟಿದ್ದರು ಎಂಬುದು ಬೆಳಕಿಗೆ ಬಂದಿದೆ.
ಬಾಲಕನ ಅಪಹರಣ ಮಾಡುವಂತೆ ವ್ಯಕ್ತಿಯೊಬ್ಬ ಈ 6 ಜನರಿಗೆ 7 ಲಕ್ಷ ರು ಸುಪಾರಿ ಕೊಟ್ಟ ವ್ಯಕ್ತಿ ಯಾರೆಂಬು ಇನ್ನೂ ಗೊತ್ತಾಗಿಲ್ಲ. ಆದರೆ ಬಾಲಕನ ತಂದೆಗೆ ಪರಿಚಯ ಇರುವ ವ್ಯಕ್ತಿ ಯೇ ಈ ಕೃತ್ಯ ಮಾಡಿದ್ದಾನೆ ಎಂಬುದು ಗೊತ್ತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.
ಬಾಲಕನ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಈ ಪೈಕಿ ಮಧುಗಿರಿಯತ್ತ ಶೋಧನೆಗೆ ಹೊರಟಿದ್ದ ತಂಡಕ್ಕೆ ಬಾಲಕನನ್ನು ಕೋಲಾರದಲ್ಲಿ ಬಚ್ಚಿ ಇಡಲಾಗಿದೆ ಎಂಬ ಮಾಹಿತಿ ಆಧರಿಸಿ 6 ಜನರನ್ನು ಬಂಧಿಸಲಾಯಿತು ಎಂದು ಹೇಳಿದರು.
ಬಾಲಕನ ತಂದೆ ಬಿಜೋಯ್ ನಾಲ್ಕು ವರ್ಷಗಳ ಹಿಂದೆ ಬೀಟ್ ಕಾಯಿನ್ ಖರೀದಿಸಿದ್ದರು. ಈಗ ಬೀಟ್ ಕಾಯಿನ್ ವಹಿವಾಟು ಲಾಭದಾಯಕ ಆಗುತ್ತದೆ ಎಂದು ಲೆಕ್ಕಾಚಾರ ಹಾಕಿ ಪರಿಚಯ ಇರುವ ವ್ಯಕ್ತಿ ಬಾಲಕನನ್ನು ಅಪಹರಣ ಮಾಡಿಸಿದ್ದಾನೆಂದು ತಿಳಿಸಿದರು.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment