March 12, 2026

Newsnap Kannada

The World at your finger tips!

PM,accident,Tumkur

Tumkur accident: Prime Minister announced Rs 2 lakh compensation for the deceased ತುಮಕೂರು ಅಪಘಾತ: ಸತ್ತವರಿಗೆ 2 ಲಕ್ಷ ರು ಪರಿಹಾರ ಘೋಷಿಸಿದ ಪ್ರಧಾನಿ

ತುಮಕೂರು ಅಪಘಾತ: ಸತ್ತವರಿಗೆ 2 ಲಕ್ಷ ರು ಪರಿಹಾರ ಘೋಷಿಸಿದ ಪ್ರಧಾನಿ

Spread the love

ತುಮಕೂರಲ್ಲಿ ಇಂದು ಬೆಳಗಿನ ಜವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನಿ, ಕರ್ನಾಟಕದ ತುಮಕೂರಲ್ಲಿ ನಡೆದ ರಸ್ತೆ ಅಪಘಾತವು ಹೃದಯ ವಿದ್ರಾವಕವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.ಇದನ್ನು ಓದಿ –ಸರ್ಕಾರದ ಟ್ರಸ್ಟ್ ಗಳ ಅಧ್ಯಕ್ಷ ಸ್ಥಾನ ನಿರಾಕರಿಸಿದ ಸೂಲಿಬೆಲೆ, ಸಾಹಿತಿ ದೇರ್ಲ

ಮೃತರ ಕುಟುಂಬಕ್ಕೆ ತಲಾ ಪಿಎಂಎನ್​ಆರ್​ಎಫ್​ ಅಡಿಯಲ್ಲಿ 2 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್ ಬಳಿ ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿ 14 ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

error: Content is protected !!