Karnataka

ಆರ್.ಜಯಕುಮಾರ್ ಮತ್ತು ಕೆ.ಲಕ್ಷ್ಮಣ ಅವರಿಗೆ ಕೆ.ಯೂ.ಡಬ್ಲ್ಯೂ.ಜೆ.ಯಿಂದ ಶ್ರದ್ಧಾಂಜಲಿ

  • ವೃತ್ತಿಜೀವನದ ಅರ್ಪಣಾ ಮನೋಭಾವ ವ್ಯಕ್ತಿತ್ವದ ಕೈಗನ್ನಡಿ: ರಾಜಾ ಶೈಲೇಶ್ ಚಂದ್ರ ಗುಪ್ತಾ

ಬೆಂಗಳೂರು: ಪತ್ರಕರ್ತರು ಅರ್ಪಣಾ ಮನೋಭಾವದೊಂದಿಗೆ ಕರ್ತವ್ಯ ನಿರ್ವಹಿಸಿದರೆ, ಅವರ ವ್ಯಕ್ತಿತ್ವಕ್ಕೆ ಮನ್ನಣೆ ದೊರೆಯುತ್ತದೆ. ಆ ಮೂಲಕ ಅವರ ಹೆಸರು ಸಮಾಜದಲ್ಲಿ ಸ್ಥಿರಸ್ಥಾಯಿಯಾಗಿ ನಿಲ್ಲಲು ಸಾಧ್ಯ ಎಂದು ಪ್ರಜಾವಾಣಿ ಹಿರಿಯ ಪತ್ರಕರ್ತ ರಾಜಾ ಶೈಲೇಶ್ ಚಂದ್ರ ಗುಪ್ತಾ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆ.ಯೂ.ಡಬ್ಲ್ಯೂ.ಜೆ) ಏರ್ಪಡಿಸಿದ್ದ ಆರ್.ಜಯಕುಮಾರ್ ಹಾಗೂ ಕೆ.ಲಕ್ಷ್ಮಣ್ ಅವರ ಶ್ರದ್ಧಾಂಜಲ್ಲಿ ಸಭೆಯಲ್ಲಿ ಮಾತನಾಡಿದರು.

ಬಹಳಷ್ಟು ಪತ್ರಕರ್ತರು ಚಳುವಳಿಯ ವಿವಿಧ ಆಯಾಮಗಳ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ್ದು ನಮ್ಮ ನಾಡಿನ ಅದೃಷ್ಟ. ಆರ್. ಜಯಕುಮಾರ್ ಎಂದೂ ಕೂಡಾ ತಮ್ಮ ನಂಬಿದ ಸಿದ್ಧಾಂತದ ಜೊತೆ ರಾಜಿಯಾದವರಲ್ಲ. ಆ ಕಾರಣಕ್ಕಾಗಿಯೇ ಅವರು ವಿಶಿಷ್ಟ ಪತ್ರಕರ್ತರೆನಿಸಿಕೊಂಡರು ಎಂದೂ ಅವರು ಹೇಳಿದರು.

ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ ಮಾತನಾಡಿ, ಗಟ್ಟಿಯಾದ ನಿಲುವು ಮತ್ತು ಕಾಳಜಿಗಳನ್ನು ಹೊಂದಿದ್ದ ಜಯಕುಮಾರ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿ, ಚಳವಳಿ ಮೂಲಕವೇ ನಮ್ಮೆಲ್ಲರನ್ನು ಪ್ರೇರೇಪಿಸಿದ್ದ ಜಯಕುಮಾರ್ ಅವರ ಬದುಕೇ ಒಂದು ಹೋರಾಟವಾಗಿತ್ತು ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಆರ್. ಜಯಕುಮಾರ್ ತಮ್ಮ ಪ್ರಖರ ಬರವಣಿಗೆಯ ಮೂಲಕ್ ಜನಪ್ರಿಯರಾದವರು, ನಿರ್ಭೀತಿಯಿಂದ ಪತ್ರಿಕೋದ್ಯಮದಲ್ಲಿ ಉತ್ತಮ್ ಹೆಸರನ್ನು ಸಂಪಾದಿಸಿಕೊಂಡವರು ಎಂದರು.

ಡಾ. ಲೀಲಾ ಸಂಪಿಗೆ ಅವರು ಮಾತನಾಡಿ ತಮ್ಮ ಪತಿ ಜಯಕುಮಾರ್ ಜನಪರ ಕಾಳಜಿಯುಳ್ಳವರಾಗಿದ್ದರು. ಅಂಥವರನ್ನು ಪಡೆದದ್ದು ತನ್ನ ಅದೃಷ್ಟ ಅವರೊಬ್ಬ ಮಾದರಿ ವ್ಯಕ್ತಿತ್ವದವರಾಗಿದ್ದರು ಎಂದು ಜೀವಿತ ಕಾಲದಲ್ಲಿನ ಸಾಮಾಜಿಕ ಕಳಕಳಿ, ದಾಂಪತ್ಯ ಜೀವನದ ಸಿಹಿ- ಕಹಿ ಅನುಭವಗಳನ್ನು ಹಂಚಿಕೊಂಡರು.

ನುಡಿನಮನ ಕಾರ್ಯಕ್ರಮದಲ್ಲಿ ಈ.ಬಸವರಾಜ್, ಎಸ್.ಆರ್.ಆರಾಧ್ಯ, ಬೋಪಯ್ಯ ಚಾವಂಡ, ನಗರ ಘಟಕದ ಶಿವರಾಜ್, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಖಜಾಂಚಿ ಎಂ. ವಾಸುದೇವ ಹೊಳ್ಳ ಮಾತನಾಡಿದರು.ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ರಾಜ್ಯ ಸಮಿತಿ ಸದಸ್ಯರಾದ ಸೋಮಶೇಖರ ಗಾಂಧಿ, ಕೆ.ಆರ್. ದೇವರಾಜ್, ನಗರಘಟಕದ ಅಧ್ಯಕ್ಷ ಸತ್ಯನಾರಾಯಣ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೇಕಟ್ ಮುಂತಾದವರು ಹಾಜರಿದ್ದರು.

Team Newsnap
Leave a Comment
Share
Published by
Team Newsnap

Recent Posts

ಪಾದಚಾರಿಗಳ ಮೇಲೆ ಬೈಕ್ ಹರಿದು ನಾಲ್ವರು ಸಾವು

ವಿಜಯಪುರ: ಮೂತ್ರ ವಿಸರ್ಜನೆಗೆಂದು ರಸ್ತೆ ದಾಟುತ್ತಿದ್ದ ಯುವಕರ ಮೇಲೆ ಬೈಕ್ ಹರಿದು ಜಾತ್ರೆಗೆಂದು ಬಂದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ… Read More

September 6, 2024

ಇದು ಸಮರ್ಥನೆಯಲ್ಲ..! ನೇರ ನುಡಿ..!

ಶಿಕ್ಷಣ ಮತ್ತು ವ್ಯವಸ್ಥೆ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ".. ಮೊದಲನೆಯಯದಾಗಿ ನನಗೆ ವಿದ್ಯೆ ಕಲಿಸಿ ಸಮಾಜದಲ್ಲಿ ಒಂದು ಉತ್ತಮವಾಗಿ… Read More

September 5, 2024

ಗುರು ಎಂಬೊ ಅರಿವಿನ ವಿಸ್ತಾರ….

'ಗುರುವಿನ ಗುಲಾಮನಾಗುವ ತನಕದೊರೆಯದಣ್ಣ ಮುಕುತಿ".ಎಂದು ಪುರಂದರದಾಸರು ಗುರುವಿನ ಮಹಿಮೆಯನ್ನು ಬಹು ಹಿಂದೆಯೇ ಹೇಳಿದ್ದಾರೆ,  ಪ್ರಾಚೀನ ಕಾಲದಲ್ಲಿ ಗುರು ತನ್ನ ಶಿಷ್ಯನಿಗೆ  ತನ್ನ… Read More

September 5, 2024

ನಿಸ್ವಾರ್ಥ ಜೀವಿ ಜ್ಞಾನದ ಭುವಿ

"ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ"ಎಂಬಂತೆ ವಿದ್ಯಾರ್ಥಿಗಳು ಗುರುವಿನ ಗುಲಾಮನಾದಾಗಲೇ ಅಪ್ರತಿಮ ಬದುಕು ರೂಪಿಸಿಕೊಳ್ಳುವನು ಎಂಬುದು ಅಕ್ಷರಶಃ ಸತ್ಯ.ಅಕ್ಷರಗಳ ಕಲಿಸುತ… Read More

September 5, 2024

ಸಿದ್ದರಾಮಯ್ಯ ನ್ಯಾಯಾಲಯದ ತೀರ್ಪು ಬರುವ ಮೊದಲು ರಾಜೀನಾಮೆ ನೀಡಲಿ: ಬಿ ಎಸ್ ಯಡಿಯೂರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಲಯದ ತೀರ್ಪು ಬರುವ ಮೊದಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಮಾಜಿ ಸಿಎಂ… Read More

September 5, 2024

ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್ ಜೋಡಿ

ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಸಂತಸದ ಸುದ್ದಿಯನ್ನು ಡಾರ್ಲಿಂಗ್… Read More

September 5, 2024