January 28, 2026

Newsnap Kannada

The World at your finger tips!

police 1

ಮೈಸೂರಿನಲ್ಲಿ ದುರಂತ : 16 ವರ್ಷದ ಮಗನ ಮುಂದೆಯೇ ತಂದೆಯ ಹತ್ಯೆ

Spread the love

ತಮ್ಮ 16 ವರ್ಷದ ಮಗನ ಮುಂದೆಯೇ ತಂದೆಯನ್ನು ದುಷ್ಕರ್ಮಿಯೊಬ್ಬ ಮನೆಗೆ ನುಗ್ಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಬೃಂದಾವನಾ ಬಡಾವಣೆಯಲ್ಲಿ ಜರುಗಿದೆ

ಸಂಪತ್ ಕುಮಾರ್(60) ಕೊಲೆಯಾದ ದುರ್ದೈವಿ. ಸಂಪತ್ ಕುಮಾರ್ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿಯಾಗಿದ್ದರು.
ಪತ್ನಿ ಗಾಯತ್ರಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಗಾಯತ್ರಿ ಅವರು ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ.ಇದನ್ನು ಓದಿ –ಗಣೇಶೋತ್ಸವ ಆಚರಿಸುತ್ತೇವೆ, ತಾಕತ್ತಿದ್ದರೆ ತಡೆಯಿರಿ: ಜಮೀರ್‌ಗೆ ಶ್ರೀರಾಮ ಸೇನೆ ಚಾಲೆಂಜ್

ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಸಂಪತ್ ಅವರನ್ನು ದುಷ್ಕರ್ಮಿ ರಾಡ್‍ನಿಂದ ಹೊಡೆದು ಅವರ 16 ವರ್ಷದ ಮಗನ ಮುಂದೆಯೇ ಹತ್ಯೆ ಮಾಡಿದ್ದಾನೆ. ಮನೆಗೆ ಬಂದು ನೋಡಿದ ಮೇಲೆ ಗಾಯತ್ರಿ ಅವರಿಗೆ ವಿಷಯ ತಿಳಿದಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

ಪ್ರಕರಣ ವಿ.ವಿ.ಪುರಂನಲ್ಲಿ ದಾಖಲಾಗಿದೆ. ದುಷ್ಕರ್ಮಿ ಯಾರು, ಯಾವ ಉದ್ದೇಶಕ್ಕೆ ಈ ಕೆಲಸ ಮಾಡಿದ್ದಾನೆ ಎಂಬುದು ತಿಳಿದುಬಂದಿಲ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!