ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯುವ ಸಂದರ್ಭದಲ್ಲಿ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿ ಈ ಭೀಕರ ಘಟನೆ ಸಂಭವಿಸಿದೆ.
ನೂಕುನುಗ್ಗಲು ಮೊದಲು ತಮಿಳುನಾಡಿನ ಸೇಲಂ ಮೂಲದ ಮಹಿಳೆಯೊಬ್ಬರ ಸಾವಿಗೆ ಕಾರಣವಾಯಿತೆಂಬ ವರದಿಯಾಗಿ ತಿಳಿದುಬಂದರೂ, ಹೊಸ ಮಾಹಿತಿಯ ಪ್ರಕಾರ 6 ಮಂದಿ ಸಾವನ್ನಪ್ಪಿದ್ದಾರೆ. 3 ಮಂದಿ ಆಸ್ಪತ್ರೆ ತಲುಪುವ ಮಾರ್ಗದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
#BREAKING #STAMPEDE
— Revathi (@revathitweets) January 8, 2025
At least two people feared dead in a stampede in Tirumala Tirupathi Devastanam today. #AndhraPradesh
The tragic incident occurred at Vishnu Nivasam in Tirupati during the distribution of Vaikuntha Dwara Sarva Darshan tokens.
One of the victim is… pic.twitter.com/YEwecG5rFf
ಘಟನೆ ಹೇಗೆ ನಡೆಯಿತು?
ಜನವರಿ 10ರಂದು ವೈಕುಂಠ ಏಕಾದಶಿಯ ದರ್ಶನಕ್ಕಾಗಿ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ ಮಂಡಳಿ) ಟಿಕೆಟ್ ವಿತರಣೆ ಪ್ರಾರಂಭಿಸಿತ್ತು. 4 ಸಾವಿರಕ್ಕೂ ಹೆಚ್ಚು ಭಕ್ತರು ಟಿಕೆಟ್ ಕೌಂಟರ್ ಬಳಿ ಸೇರಿದ್ದರು. ಟಿಕೆಟ್ ವಿತರಣೆ ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಬೇಕಾಗಿದ್ದರೂ, ಮಧ್ಯರಾತ್ರಿ 12 ಗಂಟೆಯಲ್ಲಿಯೇ ಟಿಕೆಟ್ ನೀಡಲಾಗುವ ಸುದ್ದಿ ಹರಿದಾಡಿದ ಕಾರಣ ಭಕ್ತರು ದೊಡ್ಡ ಪ್ರಮಾಣದಲ್ಲಿ ಮುಗಿಬಿದ್ದರು.
ಪೊಲೀಸರ ಜವಾಬ್ದಾರಿ ಮತ್ತು ಭಕ್ತರ ಸ್ಥಿತಿ
ಪೊಲೀಸರು ನೂಕುನುಗ್ಗಲನ್ನು ನಿಯಂತ್ರಿಸಲು ಮತ್ತು ಶಿಸ್ತು ಪಾಲಿಸಲು ಪ್ರಯತ್ನಿಸಿದರು. ಸ್ಥಳದಲ್ಲಿಯೇ ಅವರು ಗಾಯಾಳುಗಳಿಗೆ ತಕ್ಷಣವೇ ಸಿಪಿಆರ್ ನೀಡಲು ಮುಂದಾದರು. ರಸ್ತೆಗಳಲ್ಲಿ ನಿಂತು ಭಕ್ತರು “ಗೋವಿಂದ” ಎಂಬ ಭಜನೆಗಳನ್ನು ಮಾಡುತ್ತಿದ್ದರು.
ಇದನ್ನು ಓದಿ –ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ಪ್ರಸ್ತುತ ಪರಿಸ್ಥಿತಿ
ಈ ದುರಂತದ ನಂತರ, ಗಾಯಾಳುಗಳನ್ನು ಚಿಕಿತ್ಸೆಗೆ ಕಳುಹಿಸಲಾಗಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಸಮಾನಗೊಳಿಸಲು ಮುಂದಾಗಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು