ನಗುವು ನಗೆ ನೀಡುವ ಪುನೀತ್ ಸ್ಟಾರ್ ಕುಟುಂಬದವರಾಗಿದ್ದರೂ, ಹಸಿವಾತನಹಿತನಾಗಿದ್ದು ಎಲ್ಲರನ್ನೂ ತಮ್ಮ ತಮ್ಮನೆಂದು ಆತ್ಮೀಯತೆಯಿಂದ ಬಾಚಿಕೊಂಡರು. ಇಂದಿಗೆ ಅಪ್ಪು ಅಗಲಿಕೆಯೆ 3 ವರ್ಷ, ಆದರೆ ಅವರ ಕೊರತೆಯ ನೋವು ಅಭಿಮಾನಿಗಳ ಮನದಲ್ಲಿ ಕಡಿಮೆಯಾಗಿಲ್ಲ.
ಪುಣ್ಯಸ್ಮರಣೆ ಪ್ರಯುಕ್ತ ಅವರ ಪತ್ನಿ ಅಶ್ವಿನಿ, ರಾಘವೇಂದ್ರ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಯುವರಾಜ್ ಕುಮಾರ್, ಅಪ್ಪು ಪುತ್ರಿಯರು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಪ್ಪು ಸಮಾಧಿಯನ್ನು ಹೂವುಗಳಿಂದ, ದೀಪಗಳಿಂದ ಅಲಂಕರಿಸಲಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು ಸಮಾಧಿ ಬಳಿ ಬಂದು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.ಇದನ್ನು ಓದಿ-ಚನ್ನಪಟ್ಟಣ ಮತ್ತು ರಾಮನಗರ ಅವಳಿ ನಗರ: ಎಚ್.ಡಿ. ಕುಮಾರಸ್ವಾಮಿ
ಅಪ್ಪು ಅಗಲಿಕೆಯಿಂದ ಅಭಿಮಾನಿಗಳು ಕೈ ಕೈಜೋಡಿಸಿ ಪುಣ್ಯ ಕಾರ್ಯಗಳಲ್ಲಿ ತೊಡಗಿದ್ದಾರೆ. ಇಂದು ಪುಣ್ಯ ಸ್ಮರಣೆಯ ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿ ಹಾಗೂ ರಾಜ್ಯಾದ್ಯಂತ ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ. ಇತ್ತೀಚೆಗೆ ಯಲಗಚ್ಚು ಪ್ರದೇಶದಲ್ಲಿ ಅಪ್ಪು ಅಭಿಮಾನಿ ಒಂದು ಗುಡಿಯನ್ನು ನಿರ್ಮಿಸಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಅಲ್ಲಿ ಕೂಡಾ ವಿಶೇಷ ಪೂಜೆ ನಡೆಯುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು