January 29, 2026

Newsnap Kannada

The World at your finger tips!

NEET,student,harassment

ಕಪಿಲಾ ನದಿಗೆ ಹಾರಿ ಮೂವರು ಮಹಿಳೆಯರು ಆತ್ಮಹತ್ಯೆಗೆ ಯತ್ನ

Spread the love

ನಂಜನಗೂಡಿನ ಕಪಿಲಾ ನದಿಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೂವರು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಒಬ್ಬ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.

ಪಾಂಡವಪುರ ತಾಲೂಕಿನ ಬ್ಯಾಂಕ್ ಉದ್ಯೋಗಿ ರಶ್ಮಿ (35), ರಶ್ಮಿಯ ತಾಯಿ ಅಕ್ಕಮ್ಮ, ರಶ್ಮಿಯ ಮಗಳು ಮಿಂಚು ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ ಆತ್ಮಹತ್ಯೆ ಗೆ ಮುಂದಾಗಿದ್ದಾರೆ.

ಬ್ಯಾಂಕ್ ಉದ್ಯೋಗಿಯಾದ ರಶ್ಮಿ 50 ಲಕ್ಷ ರೂಪಾಯಿಗಳ ಸಾಲ ಮಾಡಿದ್ದರು. ಇದರಿಂದ ನಿತ್ಯವೂ ಅವರ ಮನೆಯಲ್ಲಿ ಜಗಳಗಳು ನಡೆಯುತ್ತಿತ್ತು. ಇದರಿಂದ ಮನನೊನಂದ ರಶ್ಮಿ, ಅವರ ತಾಯಿ‌ ಅಕ್ಕಮ್ಮ, ಮಗಳು ಮಿಂಚು ನದಿಗೆ ಧುಮುಕಿದ್ದಾರೆ.

ಇವರು ನದಿಗೆ ಹಾರಿದ ತಕ್ಷಣ ಅಲ್ಲೇ ಇದ್ದ ದನಗಾಹಿಗಳು ಇವರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ರಶ್ಮಿಯವರನ್ನು ಹೊರತುಪಡಿಸಿ ಅಕ್ಕಮ್ಮ ಹಾಗೂ ಮಿಂಚು ಅವರನ್ನು ದನಗಾಹಿಗಳು ಕಾಪಾಡಿದ್ದಾರೆ. ಆದರೆ ರಶ್ಮಿ ಮೃತರಾಗಿದ್ದಾರೆ. ಪ್ರಕರಣವನ್ನು ನಂಜನಗೂಡಿನ ಗ್ರಾಮಾಂತರ ಠಾಣೆಯ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ.

error: Content is protected !!