January 28, 2026

Newsnap Kannada

The World at your finger tips!

suspended

ಕರ್ತವ್ಯ ಲೋಪದ ಪರಿಣಾಮ: ಮೂವರು ಪೊಲೀಸ್ ಕಾನ್ಸ್ ಟೇಬಲ್ ಅಮಾನತು

Spread the love

ದಾವಣಗೆರೆ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ದಾವಣಗೆರೆಯ ಮೂವರು ಪೊಲೀಸ್ ಕಾನ್ಸ್ ಟೇಬಲ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಅಮಾನತುಗೊಂಡ ಪೊಲೀಸರು ದಾವಣಗೆರೆ ಪೊಲೀಸ್ ಠಾಣೆಯ ಟಿ. ಮಂಜಪ್ಪ, ಪಿ. ಆಕಾಶ್ ಮತ್ತು ಆರ್‌ಎಂಸಿ ಠಾಣೆಯ ಹೆಚ್. ಚಂದ್ರಶೇಖರ್ ಎಂದು ಗುರುತಿಸಲಾಗಿದೆ.

ಜನವರಿ 29ರಂದು ದಾವಣಗೆರೆಯ ಮಂಡಿಪೇಟೆಯಲ್ಲಿ ಚಿನ್ನದ ಅಂಗಡಿಯೊಂದರಿಂದ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣ ಕಳ್ಳತನವಾಗಿತ್ತು.ಇದನ್ನು ಓದಿ –ರೇಖಾ ಗುಪ್ತಾ ದೆಹಲಿ ನೂತನ ಮುಖ್ಯಮಂತ್ರಿ

ಈ ಘಟನೆ ನಡೆದ ದಿನ, ಈ ಮೂವರು ಕಾನ್ಸ್ ಟೇಬಲ್‌ಗಳನ್ನು ಗಸ್ತು ಸೇವೆಗೆ ನಿಯೋಜಿಸಲಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಕರ್ತವ್ಯ ಲೋಪ ಸಾಬೀತಾಗಿರುವ ಕಾರಣ, ಮೂವರನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗಿದೆ.

error: Content is protected !!