ಯಾರು , ಯಾವ ರೀತಿ ಶತ್ರುಗಳು ಎಂಬುದನ್ನು ಟಿಕ್​​ ಮಾಡುವ ಸಮಯ ಬಂದಿದೆ – ನಟ ದರ್ಶನ್

Team Newsnap
1 Min Read

ಹಿತಶತ್ರು, ಬಹಿರಂಗ ಶತ್ರು, ಅಂತರಂಗ ಶತ್ರುವೂ ಇರ್ತಾನಂತೆ, ಈ ಮೂವರು ಯಾರು ಎಂಬುದನ್ನು ಟಿಕ್​​ ಮಾಡುವ ಸಮಯ ಬಂದಿದೆ ಎಂದು ನಟ ದರ್ಶನ್​​ ತಿಳಿಸಿದರು. ‌

ಮೈಸೂರಿನ ಬಳಿ ಇರುವ ತೂಗುದೀಪ ಫಾರ್ಮ್​ ಹೌಸ್​​ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್, ನಮ್ಮ ಸುತ್ತ ಮೂರು ರೀತಿಯ ಶತ್ರುಗಳ ಇರ್ತಾರೆ ಎಂದು ದೊಡ್ಡವರು ಹೇಳಿದ್ದಾರೆ. ಈ ಮೂವರು ಶತ್ರುಗಳು ಯಾರು ಎಂದು ಮಾರ್ಕ್​​​ ಮಾಡುವ ಸಮಯ ಇದು ಎಂದು ತಿಳಿಸಿದರು.

ಯಾರು ಎಲ್ಲಿ ಇರ್ತಾರೆ ಎಂದು ಗೊತ್ತಾಗುವುದಿಲ್ಲ. ಹಿತಶತ್ರು ಪಕ್ಕದಲ್ಲೇ ಇರ್ತಾನೆ, ಬಹಿರಂಗ ಶತ್ರು ಎದುರಲ್ಲೇ ಇರ್ತಾನೆ, ಹೇಗಾದ್ರೂ ಹೋರಾಟ ಮಾಡಬಹುದು. ಈ ಅಂತರಂಗ ಶತ್ರು ಎಲ್ಲಿರುತ್ತಾನೆ ಎಂದು ಗೊತ್ತಾಗುವುದಿಲ್ಲ. ನಾವು ಅವರು ಯಾರು ಎಂದು ಮಾರ್ಕ್​​ ಮಾಡಬೇಕು. ಈಗ ಎಲ್ಲರನ್ನೂ ಮಾರ್ಕ್​ ಮಾಡುತ್ತಿದ್ದೇನೆ, ಇದೇನು ಹೊಸದಲ್ಲ. ನಿಮಗೀಗ ಅರ್ಥ ಆಯ್ತು ಅಂದುಕೊಳ್ಳುತ್ತೇನೆ ಎಂದರು ದರ್ಶನ್​.

ಇಂದ್ರಜಿತ್‌ ತಾಕತ್ತು‌‌ ಇದ್ರೆ‌?

ಇದೇ ವೇಳೆ ಸುಮಲತಾ ಮತ್ತು ಟೀಂ ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಇದರ ಬಗ್ಗೆ ಮಾತಾಡಲ್ಲ. ಇದರ ಹಿಂದಿನ ಕಾಣದ ಕೈಗಳು ಯಾರು ಎಂದು ಪತ್ತೆ ಮಾಡುತ್ತೇನೆ. ಈ ವಿಚಾರದ ಚರ್ಚೆ ಈಗ ಬೇಡ, ಮೊದಲು ಇಂದ್ರಜಿತ್​​ ಲಂಕೇಶ್​​​ ಗಂಡಸ್ಸಾಗಿದ್ರೆ ನನ್ನ ವಾಯ್ಸ್​ ನೋಟ್​ ಬಿಡುಗಡೆ ಮಾಡಲಿ ಎಂದು ಸವಾಲ್​ ಹಾಕಿದರು.

Share This Article
Leave a comment