ಗೋಕರ್ಣದ ಮೇನ್ ಬೀಚ್ ನ ಸಮುದ್ರ ಅಲೆಗಳೊಂದಿಗೆ ಆಟ ಆಡುವಾಗ ಮೂವರು ನೀರು ಪಾಲಾದ ಘಟನೆ ಗುರುವಾರ ಜರುಗಿದೆ.ಕೊಳ್ಳೇಗಾಲ ಮೂಲದ ಸುಮಾ ಸಿದ್ದರಾಜ (23) ರವಿ(35) ತಿಪ್ಪೇಶ್ ನಾಯಕ (19) ಅವರು ಜಲ ಸಮಾಧಿಯಾಗಿದ್ದಾರೆ.
ಕೊಳ್ಳೇಗಾಲ ದಿಂದ 16 ಜನರ ತಂಡವೊಂದು ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಗೋಕರ್ಣದ ಬೀಚ್ ನಲ್ಲಿ ಇಳಿದು ಆಟ ಆಡುವಾಗ ಈ ದುರಂತ ಸಂಭವಿಸಿದೆ.
ಗೋಕರ್ಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.