February 20, 2026

Newsnap Kannada

The World at your finger tips!

new dc

ಮಂಡ್ಯದ ನೂತನ ಜಿಲ್ಲಾಧಿಕಾರಿಯಾಗಿ ಎಸ್​. ಅಶ್ವಥಿ ಅಧಿಕಾರ ಸ್ವೀಕಾರ

Spread the love

ಮಂಡ್ಯ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎಸ್​.ಅಶ್ವಥಿಯವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ನಿರ್ಗಮಿತ ಡಿಸಿ ಡಾ.ಎಂ.ವಿ. ವೆಂಕಟೇಶ್ ಅಶ್ವಥಿ ಅವರಿಗೆ​ ಅಧಿಕಾರ ಹಸ್ತಾಂತರ ಮಾಡಿದರು.

ಅಶ್ವಥಿ ಈ ಹಿಂದೆ ದಾವಣಗೆರೆಯಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ದ್ದರು. ಜಿಲ್ಲೆಯಲ್ಲಿ ಕಳೆದ 1 ವರ್ಷ 6 ತಿಂಗಳಿಂದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶ್​ ನೂತನ ಡಿಸಿಯನ್ನು ಸ್ವಾಗತಿಸಿದರು.

ಅಧಿಕಾರ ಸ್ವೀಕಾರದ ನಂತರ  ವೆಂಕಟೇಶ್​ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹಾಗೂ  ಅದನ್ನು ತಾವು ಪರಿಹರಿಸಿದ ಬಗ್ಗೆ ವೆಂಕಟೇಶ್ ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ನೂತನ ಜಿಲ್ಲಾಧಿಕಾರಿ ಅಶ್ವಥಿ, ಮಂಡ್ಯ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಡಾ. ವೆಂಕಟೇಶ್​ ತಿಳಿಸಿದ್ದಾರೆ, ಸದ್ಯದಲ್ಲೇ ಅವುಗಳನ್ನು ನಿವಾರಿಸುತ್ತೇನೆ. ಕೆಲವು ಯೋಜನೆಗಳನ್ನು ಅವರಿಗೆ ಜಾರಿಗೆ ತರಲು ಸಾಧ್ಯವಾಗಿಲ್ಲ, ಅದನ್ನ ನಾನು ಮಾಡುತ್ತೇನೆ. ಅವರ ಕನಸನ್ನು ನನಸು ಮಾಡುತ್ತೇನೆ ಎಂದು ಹೇಳಿದರು.

ಕಚೇರಿಯ ಅಧಿಕಾರಿಗಳು, ನೂತನ ಹಾಗೂ ಮಾಜಿ ಜಿಲ್ಲಾಧಿಕಾರಿಗಳಿಬ್ಬರನ್ನೂ ಅಭಿನಂದಿಸಿದರು.

new dc1

ಕಾರ್ಯಕ್ರಮದಲ್ಲಿ ಹೆಚ್ಚು ವರಿ ಜಿಲ್ಲಾಧಿಕಾರಿ ಶೈಲಜಾ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!