ಕಾಡಿನ ರಾಜ ಎಂದೇ ಖ್ಯಾತಿಯಾಗಿದ್ದ ಮಂಡ್ಯದ ಹಿರಿಯ ಪತ್ರಕರ್ತ, ವನಸುಮ ಪತ್ರಿಕೆಯ ಸಂಪಾದಕ ಆರ್.ಎಲ್. ವಾಸುದೇವರಾವ್ ರಾಳೇಕರ್(88) ಭಾನುವಾರ ಬೆಳಗ್ಗೆ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಾಸುದೇವರಾವ್ ಇಂದು ಬೆಳಿಗ್ಗೆ 7.30 ರ ಸಮಯದಲ್ಲಿ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದರು. ಇವರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಕಳೆದ 53 ವರ್ಷಗಳಿಂದ ವನಸುಮ ಪತ್ರಿಕೆಯನ್ನು ನಡೆಸಿಕೊಂಡು ಬಂದಿರುವ ವಾಸುದೇವ್ ರಾವ್ ಅರಣ್ಯ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ತಮ್ಮ ಪತ್ರಿಕೆ ಪ್ರಥಮ ಆದ್ಯತೆ ನೀಡಿದ್ದರು. ಮಂಡ್ಯ ಜಿಲ್ಲಾ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾಗಿಯೂ ಇವರು ಕೆಲಸ ಮಾಡಿದ್ದಾರೆ.
ಅರ್ಧ ಶತಮಾನಗಳಿಗೂ ಹೆಚ್ಚು ಕಾಲ ಅರಣ್ಯ ಮತ್ತು ಪ್ರವಾಸೋದ್ಯಮ ವಿಷಯ ಕುರಿತು ಪತ್ರಿಕೋದ್ಯಮ ನಡೆಸಿಕೊಂಡು ಬಂದ ವಾಸುದೇವ ರಾವ್ ಅರಣ್ಯ ಇಲಾಖೆ ವಲಯದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು. ವನಸುಮಾ ಎಂದರೆ ವಾಸುದೇವ ರಾವ್ , ವಾಸುದೇವ ರಾವ್ ಎಂದರೆ ವನಸುಮಾ ಎನ್ನುವಷ್ಟು ಫೇಮಸ್ ಹಾಗೂ ಪರಿಸರ ಕಾಳಜಿ ಪತ್ರಕರ್ತ ರಾಗಿದ್ದರು.
ವಾಸುದೇವ್ ರಾವ್ ನಿಧನಕ್ಕೆ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ನವೀನ್ ಚಿಕ್ಕ ಮಂಡ್ಯ , ಹಿರಿಯ ಪತ್ರಕರ್ತ ರಾದ ಪಿ ಜೆ ಚೈತನ್ಯ ಕುಮಾರ್, ಕೆ ಎನ್ ರವಿ , ಕೆ ಸಿ ಮಂಜುನಾಥ್, ಶಿವಪ್ರಕಾಶ್,ಮತ್ತೀಕೆರೆ ಜಯರಾಂ , ಕೃಷ್ಣ ಸ್ವರ್ಣ ಸಂದ್ರ, ಡಿ ಎಲ್ ಲಿಂಗರಾಜು. ಬಿ ಪಿ ಪ್ರಕಾಶ್, ಸೇರಿದಂತೆ ಅನೇಕ ಹಿರಿ ಕಿರಿಯ ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment