ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರನ ತಲೆಯಿಂದ ಜಾರಿದ ವಿಗ್ ನಿಂದಾಗಿ ಬೋಳು ತಲೆ ನೋಡಿದ ವಧು ಮದುವೆಯನ್ನೇ ರದ್ದು ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. ಹಸೆಮಣೆಯಲ್ಲಿ ಕುಳಿತಿದ್ದ ವಧು ವಿವಾಹದ ಸಂಪ್ರದಾಯಗಳನ್ನು ನಡೆಸುತ್ತಿರುವಂತೆಯೇ ಬೋಳು ವರನನ್ನು ಮದುವೆಯಾಗಲು ವಧು ನಿರಾಕರಿಸಿದಳು.
ಇದನ್ನು ಓದಿ -ವೀರೇಂದ್ರ ಹೆಗ್ಗಡೆ ಪತ್ನಿ ಹೇಮಾವತಿ ಸಹೋದರ ಡಾ.ಬಿ.ಯಶೋವರ್ಮ ನಿಧನ
ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದಿದ್ದವು. ಇನ್ನೇನು ಮಾಂಗಲ್ಯಧಾರಣೆ ಮಾಡಬೇಕು ಅನ್ನುವ ವೇಳೆ ಇಡೀ ಸನ್ನಿವೇಶವು ಬದಲಾಗಿದೆ. ವರ, ಮಂಟಪಕ್ಕೆ ಕಾಲಿಡುವ ಮೊದಲು, ಮೂರ್ಛೆ ತಪ್ಪಿದ್ದಾನೆ. ಆತ ತಲೆಸುತ್ತಿ ಕೆಳಕ್ಕೆ ಬಿದ್ದಾಗ, ವರನ ಅಸಲಿಯತ್ತು ಬಯಲಾಗಿದೆ. ಆತ ಧರಿಸಿದ್ದ ವಿಗ್ ಹೊರಬಂದಿದೆ. ಈ ವೇಳೆ ವಧುವಿನ ಕುಟುಂಬದಿಂದ ಮರೆಮಾಡಲ್ಪಟ್ಟ ಸತ್ಯವನ್ನು ಎಲ್ಲರೂ ನೋಡಿದ್ದಾರೆ.
ವರನ ಬೋಳು ತಲೆ ಕಂಡು ವಧು ಮದುವೆಗೆ ಸುತರಾಂ ಒಲ್ಲೆ ಎಂದಿದ್ದಾಳೆ. ಅನೇಕರು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ಮಧ್ಯ ಪ್ರವೇಶಿಸಿದರೂ ಸಹ ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ