57,229 ರೈತರ 1 ಲಕ್ಷ ರು ಸಾಲ ಮನ್ನಾಗೆ ಅನುದಾನ ಬಿಡುಗಡೆ ಮಾಡಿದ ಸರ್ಕಾರ

Team Newsnap
1 Min Read
Pay Farmer Abhiyan from Mandya Farmers: Pay Rs 4500 per ton of sugarcane - farmers demand ಮಂಡ್ಯ ರೈತರಿಂದಲೂ ಪೇ ಫಾರ್ಮರ್ ಅಭಿಯಾನ : ಟನ್ ಕಬ್ಬಿಗೆ 4500 ರು ಕೊಡಿ - ರೈತರ ಒತ್ತಾಯ

ರಾಜ್ಯದ ರೈತರು ಸಹಕಾರ ಸಂಘ, ಸಹಕಾರ ಬ್ಯಾಂಕ್ ಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018 ರ ಜುಲೈ 10 ಕ್ಕೆ ಹೊಂದಿರುವ ಬಾಕಿ ಗರಿಷ್ಠ 1 ಲಕ್ಷ ರು. ವರೆಗಿನ ಸಾಲ ಮನ್ನಾದ ಹಣ ಬಿಡುಗಡೆ ಮಾಡಿ ಸರ್ಕಾರ ಇಂದು ಆದೇಶ ಮಾಡಿದೆ.

ಸಹಕಾರ ಸಂಘಗಳ ನಿಬಂಧಕ ಎಸ್ ಜಿಯಾಉಲ್ಲಾ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಳಿಗೆ ಈ ಕುರಿತಂತೆ ಪತ್ರ ಬರೆದಿದ್ದಾರೆ.‌

1 ಲಕ್ಷಗಳ ಸಾಲ ಮನ್ನಾ ಯೋಜನೆಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಸಾಲ ಮನ್ನಾ ವಿಶೇಷ ಕೋಷದಿಂದ 65,543 ರೈತರಿಗೆ ಸಂಬಂಧಿಸಿದಂತೆ ರೂ.350.16 ಕೋಟಿ ರುಗಳ ಹಸಿರು ಪಟ್ಟಿ ನೀಡಿದ್ದು, ಅದರ ಪಟ್ಟಿಯನ್ನು ಎಕ್ಸ್ ಎಲ್ ಶೀಟ್ ನಲ್ಲಿ ಈಗಾಗಲೇ ನೀಡಿದ್ದು, ಇದರಲ್ಲಿ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿದ್ದ ರೂ.55.01 ಕೋಟಿಗಳ ಮೊತ್ತವನ್ನು ಗಡುವು ದಿನಾಂಕದ ಆಧಾರವಾಗಿ ಅನುದಾನ ಬಿಡುಗಡೆ ಮಾಡಲು ಉಲ್ಲೇಖ 2ರಲ್ಲಿ 8,313 ರೈತರ ಪಟ್ಟಿ ನೀಡಲಾಗಿತ್ತು.

  • ಸರ್ಕಾರ ಬಾಕಿ ಇರುವ 57,229 ರೈತರಿಗೆ ಅನುದಾನ ಬಿಡುಗಡೆ ಮಾಡಲು ಅಯವ್ಯಯದಲ್ಲಿ ಲಭ್ಯವಿದೆ.
  • 260.41 ಕೋಟಿಗಳನ್ನು ಬಿಡುಗಡೆ ಮಾಡಿ, ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ ರೂ.34.73 ಕೋಟಿಗಳನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಲಾಗಿದೆ.
  • .295.14 ಲಕ್ಷಗಳನ್ನು ಬಿಡುಗಡೆ ಮಾಡಿ ಸಾಲ ಮನ್ನಾ ಯೋಜನೆಯನ್ನು ಇದೇ ಆರ್ಥಿಕ ವರ್ಷದಲ್ಲಿ ಮುಕ್ತಾಯಗೊಳಿಸಲು ಸೂಚಿಸಲಾಗಿದೆ.
Share This Article
Leave a comment