Main News

ಜಾಗತಿಕ ಜಲಕ್ಷಾಮ; ಪ್ರಥಮ 30 ನಗರಗಳಲ್ಲಿ ಬೆಂಗಳೂರು

ಜಾಗತಿಕವಾಗಿ ನೀರಿನ ಕೊರತೆ ಎದುರಿಸುತ್ತಿರುವ ಪ್ರಥಮ 30 ನಗರಗಳಲ್ಲಿ ಬೆಂಗಳೂರು ಒಂದು ಎಂದು ಜಾಗತಿಕ ತಾಪಮಾನ ಹಾಗೂ ಜಲಕ್ಷಾಮ ಕುರಿತು ಅಧ್ಯಯನ ಮಾಡುವ ಸಂಸ್ಥೆಯಾದ ಡಬ್ಲ್ಯೂ‌ಡಬ್ಲ್ಯೂಎಫ್ ಸಂಸ್ಥೆ ವರದಿ ಮಾಡಿದೆ.

ಜಾಗತಿಕವಾಗಿ ಒಟ್ಟು 100 ನಗರಗಳು ನೀರಿನ ಅಭಾವ ಎದುರಿಸುತ್ತಿವೆ. ಅದರಲ್ಲಿ 30 ನೇ ಸ್ಥಾನ ಬೆಂಗಳೂರು ಪಡೆದುಕೊಂಡಿದೆ. ‘2050ರ ವೇಳೆಗೆ ನೀರಿನ ಕೊರತೆಯಿಂದ ಬಳಲುವ ನಗರಗಳ ಸಂಖ್ಯೆ ಜಾಗತಿಕವಾಗಿ ಶೇ. 51% ಕ್ಕೆ ಏರಲಿದೆ’ ಎಂದು ವರದಿ ಹೇಳಿದೆ.

ಚೀನ, ಮಧ್ಯಪ್ರಾಚ್ಯ, ದಕ್ಷಿಣ ಏಷ್ಯಾ, ಅಮೇರಿಕಾ, ಆಫ್ರಿಕಾಗಳು ಅತಿಯಾದ ನೀರಿನ ಕೊರತೆ ಎದುರಿಸುತ್ತಿವೆ. ಜಕಾರ್ತ, ಜೋಹಾನ್ಸ್ ಬರ್ಗ್, ಬೀಜಿಂಗ್, ಇಸ್ತಾಂಬುಲ್, ಹಾಂಗ್ ಕಾಂಗ್, ಮೆಕ್ಕ, ರಿಯೋ ಡಿ ಜನೈರೊ ಜಾಗತಿಕವಾಗಿ ಜಲದ ಕೊರತೆ ಎದುರಿಸುತ್ತಿರುವ ಪಟ್ಟಿಗಳಲ್ಲಿವೆ. ಭಾರತದಲ್ಲಿ ಜೈಪುರ, ಇಂಧೋರ್, ಅಮೃತಸರ, ಪುಣೆ, ಶ್ರೀನಗರ, ಕೋಲ್ಕತ್ತಾ, ಮುಂಬೈ, ವಿಶಾಖಪಟ್ಟಣಗಳ ಜೊತೆಗೆ ಬೆಂಗಳೂರೂ ಸಹ ಸೇರಿದೆ.

“ವೇಗ ನಗರೀಕರಣದ ಫಲವಾಗಿ ಭಾರತದ ಪ್ರಮುಖ ನಗರಗಳಲ್ಲಿ ಸದ್ಯಕ್ಕೆ ನೀರಿನ ಅಭಾವ ತಾಂಡವವಾಡುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯವಾಗಲಿದೆ. ಜಲಕ್ಷಾಮದ ಸಮಸ್ಯೆಯಿಂದ ದೂರ ಸರಿಯಲು ಭಾರತದ ನಗರಗಳಲ್ಲಿ ಜಲಾನಯನ ಪ್ರದೇಶಗಳ ವಿಸ್ತರಣೆ ಅಗತ್ಯವಿದೆ’ ಎಂದು ಡಬ್ಲ್ಯೂ‌ಡಬ್ಲ್ಯೂಎಫ್ ಇಂಡಿಯಾ ಕಾರ್ಯಕ್ರಮದ ಮುಖ್ಯಸ್ಥ ಡಾ. ಸೆಜೆಲ್ ವೋರಾ ತಿಳಿಸಿದರು.

Team Newsnap
Leave a Comment
Share
Published by
Team Newsnap

Recent Posts

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024

ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಿರುಪತಿ ಲಡ್ಡನ್ನು ತಯಾರಿಸಲಾಗುತ್ತಿತ್ತು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶ: ಹಿಂದಿನ ಸರ್ಕಾರ ತಿರುಪತಿ ಲಡ್ಡುವನ್ನು ತುಪ್ಪದ ಬದಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾಗಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು… Read More

September 19, 2024

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲು

ಬೆಂಗಳೂರು: ಜೆಪಿ ಶಾಸಕ ಮುನಿರತ್ನವಿರುದ್ಧ ಮತ್ತೊಂದು ಕೇಸ್‌ ದಾಖಲಾಗಿದ್ದು , ಇದೀಗ ಶಾಸಕನ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಾಗಿದೆ. ಶಾಸಕ… Read More

September 19, 2024

ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ಗೆ ವಿಶೇಷ ಚೇತನ ಬಲಿ

ಬೆಂಗಳೂರು: ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಅಪಘಾತಕ್ಕೆ ವಿಶೇಷ ಚೇತನ ಬಲಿಯಾಗಿರುವ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಯಶವಂತಪುರದಿಂದ… Read More

September 18, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,640 ರೂಪಾಯಿ ದಾಖಲಾಗಿದೆ. 24… Read More

September 18, 2024

ಸೆ.19ರಿಂದ ವಿಎಓ/ಜಿಟಿಟಿಸಿ ಪರೀಕ್ಷೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಸೆ.19ರಿಂದ ಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ… Read More

September 17, 2024