ಅಪ್ಪಟ ದೇಸೀ ನಿರ್ಮಾಣದ ವಿಭಿನ್ನ ಗುಣರೂಪಗಳ ಸಂಗ್ರಹ.
1). ರಾಜಕಾರಣಿ //………
ಆತ್ಮ ಕಪ್ಪಾಗಿದೆ, ಮನಸ್ಸು ನಂಬಲನರ್ಹ, ಹೃದಯ ಗಟ್ಟಿಯಾಗಿದೆ. ಈಗ 50 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ.
2) ಸ್ವಾಮೀಜಿ // ………….
ಬಣ್ಣ ಬಣ್ಣದ ಆತ್ಮ, ಮನಸ್ಸು ಚಂಚಲ, ಹೃದಯ ಭದ್ರವಾಗಿದೆ. ಈಗ 60 ವರ್ಷ ವಯಸ್ಸು. ಇನ್ನೂ 30 ವರ್ಷ ಗ್ಯಾರಂಟಿ.
3). ಕ್ರೀಡಾಪಟು (ಗಂ/ಹೆ) //…….
ಆತ್ಮ ಕಪ್ಪು ಬಿಳುಪು, ಮನಸ್ಸಿನಲ್ಲಿ ಛಲ ತುಂಬಿದೆ. ಹೃದಯ ದೃಡವಾಗಿದೆ.ಈಗ ವಯಸ್ಸು 20. ಇನ್ನೂ 60 ವರ್ಷ ಗ್ಯಾರಂಟಿ.
4) ಪತ್ರಕರ್ತ/ಕರ್ತೆ //…………
ಆತ್ಮ ವಿವಿಧ ಬಣ್ಣ, ಮನಸ್ಸು ದುರಹಂಕಾರ, ಹೃದಯ ಪುಕ್ಕಲು. ಈಗ ವಯಸ್ಸು 35. ಇನ್ನು 35 ವರ್ಷ ಗ್ಯಾರಂಟಿ.
5) ಸಿನಿಮಾ ನಟ/ನಟಿ //………….
ಮೂಲ ಬಣ್ಣ ಕಪ್ಪಾಗಿದ್ದರೂ ವಿವಿಧ ಬಣ್ಣಗಳಾಗಿ ಬದಲಾಗುತ್ತದೆ. ಮನಸ್ಸು ಗೊಂದಲಮಯ .ಹೃದಯ ಕೃತಕ. ಈಗ 25 ವರ್ಷ. ಆಯಸ್ಸು ಗ್ಯಾರಂಟಿ ಕೊಡಲಾಗುವುದಿಲ್ಲ.
6) ಸೈನಿಕ //………….
ಆತ್ಮ ಬಿಳಿಯಾಗಿದೆ. ಮನಸ್ಸು ಸದೃಡ. ಹೃದಯ ಕಲ್ಲಿನಂತೆ. ಬುದ್ಧಿ ಕಡಿಮೆ. ವಯಸ್ಸು 27 .ಆಯಸ್ಸು ಗ್ಯಾರಂಟಿ ಕೊಡಲಾಗುವುದಿಲ್ಲ.
7) ಸಾಹಿತಿ //……………..
ಆತ್ಮ ಕಪ್ಪು ಬಿಳುಪು, ಮನಸ್ಸು ಸ್ವಾರ್ಥ ಅಹಂಕಾರ ಭ್ರಮೆಗಳ ಸಮ್ಮಿಲನ. ಹೃದಯ ಮೃದು. ವಯಸ್ಸು 60. ಇನ್ನೂ 20 ವರ್ಷ ಗ್ಯಾರಂಟಿ.
8) ಸರ್ಕಾರಿ ಅಧಿಕಾರಿ/ಕಾರಿಣಿ //…….
ಆತ್ಮ ಕಪ್ಪು ಮನಸ್ಸು ಧನದಾಹಿ. ಹೃದಯ
ಕಠಿಣ. ವಯಸ್ಸು 30.ಇನ್ನೂ 30 ವರ್ಷ ಗ್ಯಾರಂಟಿ.
9) ಉದ್ಯಮಿ (ಗಂ/ಹೆ) //………
ಆತ್ಮ ಕಪ್ಪು ಬಿಳುಪು, ಮನಸ್ಸು ಗೊಂದಲ ದುರಾಸೆ.
ಹೃದಯ ಸಾಧಾರಣ. ವಯಸ್ಸು 40. ಆಯಸ್ಸು ಗ್ಯಾರಂಟಿ ಇಲ್ಲ.
10) ಯುವ ಪ್ರೇಮಿ.(ಗಂ/ಹೆ). //…….
ಆತ್ಮ ಕಾಮನಬಿಲ್ಲು. ಮನಸ್ಸು ಮರ್ಕಟ. ಹೃದಯ ತುಂಬಾ ಮೃದು. ಈಗ 20 ವರ್ಷ ವಯಸ್ಸು. ಆಯಸ್ಸು ಗ್ಯಾರಂಟಿ ಇಲ್ಲ.
ಬಡವರು, ಭಿಕ್ಷುಕರು, ವೇಶ್ಯೆಯರು, ಕೂಲಿ ಕಾರ್ಮಿಕರು, ಬಡ ರೈತರು, ಅನಾಥರ ಆತ್ಮ ಮನಸ್ಸು ಹೃದಯಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಕೆಲವು ಉಚಿತ ಆಫರ್ ಗಳು ಇವೆ.
ಇಂದೇ ಬೇಟಿ ಕೊಡಿ.Stock ಇರುವವರೆಗೆ ಮಾತ್ರ ಮಾರಾಟ.
ವಿಳಾಸ :
ನಿಮ್ಮದೇ ಅಂತರಾಳ.
ಬೆಲೆ ;
ನೀವೇ ನಿಗದಿಮಾಡಿಕೊಳ್ಳಿ.
ವಿವೇಕಾನಂದ. ಹೆಚ್.ಕೆ.
ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More
ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More
ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸದಲ್ಲಿದ್ದ ಹೆಚ್.ಡಿ ರೇವಣ್ಣ ರೇವಣ್ಣರನ್ನು ಅರೆಸ್ಟ್ ಮಾಡಲು ಪದ್ಮನಾಭನಗರಕ್ಕೆ ತೆರಳಿದ್ದ SIT ತಂಡ ಮಹಿಳೆ… Read More
ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More
This website uses cookies.
Leave a Comment