ನದಿದಡದಲ್ಲಿ ನೀರು ಕುಡಿಯುತ್ತಿದ್ದ ೧೨ ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದ ದಾರುಣ ಘಟನೆ ರಾಯಚೂರು ತಾಲೂಕು ಡೊಂಗರಾಂಪುರ ಬಳಿಯ ಕೃಷ್ಣ ನದಿಯಲ್ಲಿ ಬುಧವಾರ ನಡೆದಿದೆ.
ಬಾಲಕ ಮಲ್ಲಿಕಾರ್ಜುನ ತನ್ನ ಐವರು ಗೆಳೆಯರ ಜತೆ ದನಮೇಯಿಸಲು ಮಧ್ಯಾಹ್ನ ಸುಮಾರು ೨ ರ ಸಮಯದಲ್ಲಿ ಹೋಗಿದ್ದು, ನೀರು ಕುಡಿಯುತ್ತಿದ್ದ ಈ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋದ ವಿಷಯ ಬಾಲಕರಿಂದ ಗ್ರಾಮಸ್ಥರಿಗೆ ತಿಳಿಯಿತು.
ಎರಡು ತೆಪ್ಪದಲ್ಲಿ ಸ್ಥಳೀಯ ಮೀನುಗಾರರು ನಾಪತ್ತೆಯಾದ ಮಲ್ಲಿಕಾರ್ಜುನನನ್ನು ಹುಡುಕಾಡಿದರು ಪತ್ತೆಯಾಗಲಿಲ್ಲ. ರಾತ್ರಿಯಾದ ಕಾರಣ ಹುಡುಕುವ ಕಾರ್ಯ ಸ್ಥಗಿತಗೊಂಡಿದ್ದು, ಗುರುವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ. ನದಿಯ ತಗ್ಗುಪ್ರದೇಶಗಳಲ್ಲಿ ಹೆಚ್ಚಾಗಿ ನೀರು ನಿಂತಿದ್ದು, ಈ ಭಾಗಗಳಲ್ಲಿ ಮೊಸಳೆಗಳ ಕಾಟ ವಿಪರೀತವಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ SSC CGL ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು , ಆಸಕ್ತ… Read More
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರದಲ್ಲಿ ಮನೆಯ ಗೋಡೆ ಕುಸಿದು ಬಿದ್ದು ನಾಲ್ವರು… Read More
ಬೆಂಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 20 ರಿಂದ ಮೂರು… Read More
ಚೆನ್ನೈ : ವಿಷಯುಕ್ತ ಮದ್ಯ ಕುಡಿದು ತಮಿಳು ನಾಡಿನಲ್ಲಿ 58 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್, ದುರಂತದಲ್ಲಿ… Read More
ಬೆಂಗಳೂರು: ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಇದೀಗ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ.… Read More
ಇಂದು ರಿಸರ್ವ್ ಬ್ಯಾಂಕ್ , ಎ.ಕೆ.ಸಿಂಗ್ ಅವರನ್ನು ಬಂಧನ್ ಬ್ಯಾಂಕಿನ ಮಂಡಳಿಯ ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಿದೆ. ಆರ್ಬಿಐನ ಮುಖ್ಯ ಜನರಲ್… Read More
This website uses cookies.
Leave a Comment