January 29, 2026

Newsnap Kannada

The World at your finger tips!

croco

ಬಾಲಕನನ್ನು ಎಳೆದೊಯ್ದ ಮೊಸಳೆ

Spread the love

ನದಿದಡದಲ್ಲಿ ನೀರು ಕುಡಿಯುತ್ತಿದ್ದ ೧೨ ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದ ದಾರುಣ ಘಟನೆ ರಾಯಚೂರು ತಾಲೂಕು ಡೊಂಗರಾಂಪುರ ಬಳಿಯ ಕೃಷ್ಣ ನದಿಯಲ್ಲಿ ಬುಧವಾರ ನಡೆದಿದೆ.


ಬಾಲಕ ಮಲ್ಲಿಕಾರ್ಜುನ ತನ್ನ ಐವರು ಗೆಳೆಯರ ಜತೆ ದನಮೇಯಿಸಲು ಮಧ್ಯಾಹ್ನ ಸುಮಾರು ೨ ರ ಸಮಯದಲ್ಲಿ ಹೋಗಿದ್ದು, ನೀರು ಕುಡಿಯುತ್ತಿದ್ದ ಈ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋದ ವಿಷಯ ಬಾಲಕರಿಂದ ಗ್ರಾಮಸ್ಥರಿಗೆ ತಿಳಿಯಿತು.

ಎರಡು ತೆಪ್ಪದಲ್ಲಿ ಸ್ಥಳೀಯ ಮೀನುಗಾರರು ನಾಪತ್ತೆಯಾದ ಮಲ್ಲಿಕಾರ್ಜುನನನ್ನು ಹುಡುಕಾಡಿದರು ಪತ್ತೆಯಾಗಲಿಲ್ಲ. ರಾತ್ರಿಯಾದ ಕಾರಣ ಹುಡುಕುವ ಕಾರ್ಯ ಸ್ಥಗಿತಗೊಂಡಿದ್ದು, ಗುರುವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ. ನದಿಯ ತಗ್ಗುಪ್ರದೇಶಗಳಲ್ಲಿ ಹೆಚ್ಚಾಗಿ ನೀರು ನಿಂತಿದ್ದು, ಈ ಭಾಗಗಳಲ್ಲಿ ಮೊಸಳೆಗಳ ಕಾಟ ವಿಪರೀತವಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!