ಬಾಲಕನನ್ನು ಎಳೆದೊಯ್ದ ಮೊಸಳೆ

Team Newsnap
1 Min Read

ನದಿದಡದಲ್ಲಿ ನೀರು ಕುಡಿಯುತ್ತಿದ್ದ ೧೨ ವರ್ಷದ ಬಾಲಕನನ್ನು ಮೊಸಳೆ ಎಳೆದೊಯ್ದ ದಾರುಣ ಘಟನೆ ರಾಯಚೂರು ತಾಲೂಕು ಡೊಂಗರಾಂಪುರ ಬಳಿಯ ಕೃಷ್ಣ ನದಿಯಲ್ಲಿ ಬುಧವಾರ ನಡೆದಿದೆ.


ಬಾಲಕ ಮಲ್ಲಿಕಾರ್ಜುನ ತನ್ನ ಐವರು ಗೆಳೆಯರ ಜತೆ ದನಮೇಯಿಸಲು ಮಧ್ಯಾಹ್ನ ಸುಮಾರು ೨ ರ ಸಮಯದಲ್ಲಿ ಹೋಗಿದ್ದು, ನೀರು ಕುಡಿಯುತ್ತಿದ್ದ ಈ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋದ ವಿಷಯ ಬಾಲಕರಿಂದ ಗ್ರಾಮಸ್ಥರಿಗೆ ತಿಳಿಯಿತು.

ಎರಡು ತೆಪ್ಪದಲ್ಲಿ ಸ್ಥಳೀಯ ಮೀನುಗಾರರು ನಾಪತ್ತೆಯಾದ ಮಲ್ಲಿಕಾರ್ಜುನನನ್ನು ಹುಡುಕಾಡಿದರು ಪತ್ತೆಯಾಗಲಿಲ್ಲ. ರಾತ್ರಿಯಾದ ಕಾರಣ ಹುಡುಕುವ ಕಾರ್ಯ ಸ್ಥಗಿತಗೊಂಡಿದ್ದು, ಗುರುವಾರ ಬೆಳಗ್ಗೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ. ನದಿಯ ತಗ್ಗುಪ್ರದೇಶಗಳಲ್ಲಿ ಹೆಚ್ಚಾಗಿ ನೀರು ನಿಂತಿದ್ದು, ಈ ಭಾಗಗಳಲ್ಲಿ ಮೊಸಳೆಗಳ ಕಾಟ ವಿಪರೀತವಾಗಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share This Article
Leave a comment