March 10, 2026

Newsnap Kannada

The World at your finger tips!

teja

ಹುಟ್ಟುಹಬ್ಬದ ದಿನವೇ ಬಾಲಕನ ದುರ್ಮರಣ

Spread the love

ಬೆಂಗಳೂರು: ಹುಟ್ಟುಹಬ್ಬದ ದಿನವೇ 10 ವರ್ಷದ ಬಾಲಕ ಭಾನು ತೇಜ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಅಪಘಾತದ ವಿವರ:
ಚಿತ್ತೂರಿನ ರವಿ ಮತ್ತು ಸುಮಾ ದಂಪತಿಯ ಪುತ್ರನಾದ ಭಾನು ತೇಜ (10) ಶನಿವಾರ ರಾತ್ರಿ ಅಣ್ಣನೊಂದಿಗೆ ಹೊರಮಾವುಗೆ ಹೋಗುವಾಗ ಹೆಣ್ಣೂರು ಬಂಡೆಯ ಕ್ಲಾಸಿಕ್ ರಾಯಲ್ ಗಾರ್ಡನ್ ಮುಂಭಾಗದಲ್ಲಿ ಈ ದುರಂತ ಸಂಭವಿಸಿದೆ. ಹಿಂಬದಿಯಿಂದ ಬಂದ ಟ್ರಕ್ ಏಕಾಏಕಿ ಡಿಕ್ಕಿ ಹೊಡೆದು, ಅದರ ಎರಡು ಚಕ್ರ ತಲೆಯ ಮೇಲೆ ಹರಿದ ಪರಿಣಾಮ, ಭಾನು ತೇಜ ತಕ್ಷಣವೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯರ ಪ್ರಕಾರ, ಟ್ರಕ್‌ ಅತೀ ವೇಗವೇ ಅಪಘಾತಕ್ಕೆ ಕಾರಣವಾಗಿದೆ.

ವೇದ ಕಲಿಯಲು ಬೆಂಗಳೂರಿಗೆ ಬಂದಿದ್ದ:
ಭಾನು ತೇಜ, ವೇದ ಕಲಿಯುವ ಉದ್ದೇಶದಿಂದ ಚಿತ್ತೂರಿನಿಂದ ಬೆಂಗಳೂರಿಗೆ ಬಂದಿದ್ದ. ಆರ್‌ಟಿ ನಗರದಲ್ಲಿರುವ ಅಕ್ಕನ ಮನೆಯಲ್ಲಿ ವಾಸವಿದ್ದಾನೆ. ಭಾನು ತೇಜನ ಅಣ್ಣ ಆಂಜನೇಯ ದೇವಸ್ಥಾನದ ಅರ್ಚಕರಾಗಿದ್ದು, ಧನುರ್ಮಾಸದ ಸಂದರ್ಭದಲ್ಲಿ ಬೆಳಿಗ್ಗೆ ಬಾಗಿಲು ತೆಗೆಯಲು ಆಗುವ ಸಂಕಷ್ಟವನ್ನು ತಪ್ಪಿಸಲು, ರಾತ್ರಿಯೇ ದೇವಸ್ಥಾನಕ್ಕೆ ಹೋಗಲು ಇಬ್ಬರು ದ್ವಿಚಕ್ರ ವಾಹನದಲ್ಲಿ ತೆರಳಿದ್ದರು.

ಅಪಘಾತದ ನಂತರದ ಪರಿಸ್ಥಿತಿ:
ಅಪಘಾತದಿಂದಾಗಿ ಭಾನು ತೇಜನ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಲಕನ ಅಣ್ಣನಿಗೆ ಗಾಯಗಳಾಗಿದ್ದು, ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದುರಂತದ ನಂತರ ಚಿತ್ತೂರಿನಿಂದ ಭಾನು ತೇಜನ ಪೋಷಕರು ಬೆಂಗಳೂರಿಗೆ ಆಗಮಿಸಿದ್ದಾರೆ.ಇದನ್ನು ಓದಿ –KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ

ಪೊಲೀಸರ ಕ್ರಮ:
ಹೆಣ್ಣೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

error: Content is protected !!