Categories: Main News

ಶಿಕ್ಷಕರು ನಮ್ಮ ಸಮಾಜದ ಶಿಲ್ಪಿಗಳು : ಕೆ.ಟಿ‌ ಶ್ರೀಕಂಠೇಗೌಡ

ಶಿಕ್ಷಕ ವೃತ್ತಿಗೆ ಶ್ರೇಷ್ಠವಾದ ಗೌರವ ವಿದೆ, ಘನತೆ ಇದೆ, ಭವಿಷ್ಯದ ಜನಾಂಗವನ್ನು ನಿರ್ಮಾಣ ಮಾಡುವ , ಅವರ ವ್ಯಕ್ತಿತ್ವ ವನ್ನು ಕಟ್ಟಿಕೊಡುವ ಶಿಕ್ಷಕರು ಸಮಾಜದ ಶಿಲ್ಪಿಗಳು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಭಾನುವಾರ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಧಾಕೃಷ್ಣನ್ ರವರು ಸೆಪ್ಟೆಂಬರ್ 5 ರಂದು ಜನಿಸಿ ತಮ್ಮ ವೃತ್ತಿಜೀವನವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿ,ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಬಹುದೊಡ್ಡ ಹೆಸರನ್ನು ಗಳಿಸಿದ್ದಾರೆ ಎಂದರು.

ಈ ದೇಶದ ಅತ್ಯುನ್ನತ ಹುದ್ದೆ ರಾಷ್ಟಪತಿ ಹುದ್ದೆಯನ್ನು ಗಳಿಸಿದ ಒಬ್ಬ ಶಿಕ್ಷಕರು ರಾಧಾಕೃಷ್ಣನ್ ಆಗಿದ್ದಾರೆ ಎಂದರು.

ನಾನು ಹುಟ್ಟಿದ ದಿನವನ್ನು ಶಿಕ್ಷಕ ದಿನಾಚರಣೆಯನ್ನಾಗಿಸಿದ ಮಹಾಚೇತನಾ ರಾಧಾಕೃಷ್ಣನ್ ರವರು ಎಂದರು.

ಒಬ್ಬ ಶಿಕ್ಷಕ ಜಗತ್ತಿನಲ್ಲಿ ಏನೆಲ್ಲಾ ಆಗಬಹುದು ಎಂಬುವುದಕ್ಕೆ ರಾಧಾಕೃಷ್ಣನ್ ರವರು ಬಹು ದೊಡ್ಡ ಉದಾಹರಣೆ ಎಂದರು.

ಶಿಕ್ಷಕ ಹುದ್ದೆಗೆ ಬಹುದೊಡ್ಡ ಗೌರವವಿದೆ, ಶಿಕ್ಷಕರು ಪ್ರಸುತ್ತ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ನಿರ್ವಹಿಸಿ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಹೊಸ ಶಿಕ್ಷಣ ನೀತಿ ಉತ್ತಮವಾಗಿದ್ದು, ಉತ್ತಮ ಶಿಕ್ಷಣವನ್ನು ನೀಡುವ ಜವಾಬ್ದಾರಿ ಯನ್ನು ಸರ್ಕಾರ ಮಾಡುತ್ತಿದೆ ಎಂದರು.

ಕಸ್ತೂರಿ ರಂಗನ್ ಕೊಟ್ಟ ಹೊಸ ಶಿಕ್ಷಣ ನೀತಿ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಿದೆ ಎಂದರು.

ಹೊಸ ಶಿಕ್ಷಣ ನೀತಿ ಮೂಲಕ ಶಾಲೆಯ ಸರ್ವಾಂಗೀಣ ಬೆಳೆವಣಿಗೆಯಾಗಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.

ಶಿಕ್ಷಕರು ತಮ್ಮ ಕಲಿಕೆಯಿಂದಾಗಿ, ನಿಮ್ಮ ವೃತ್ತಿಯಿಂದಾಗಿ ಸಮಾಜದಲ್ಲಿ ನೀವು ಯಾವಾಗಲೂ ಚಿರಸ್ಥಾಯಿಯಾಗಿರುತ್ತೀರಿ ಎಂದರು.

ಈ ಮೂಲಕ ರಾಧಾಕೃಷ್ಣನ್ ರವರ ತತ್ವ ಆದರ್ಶಗಳನ್ನು ಮೈಗೂಡಿಸಿ ಕೊಂಡು ಬದುಕೋಣ ಎಂದರು.

ನಂತರ ಮಾತನಾಡಿದ ಜಿ.ಪಂ ಸಿ ಇ.ಒ ದಿವ್ಯಪ್ರಭು ಸರ್ಕಾರದ ಕೆಲಸ ದೇವರ ಕೆಲಸ ಅಂತಾ ಹೇಳುತ್ತಾರೆ, ಆದರೆ ದೇವರನ್ನು , ಜಗತ್ತನ್ನು, ಬದುಕನ್ನು ತೋರಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ ಎಂದರು.

ನಾವು ಇಂದು ಏನೇ ಸಾಧನೆ ಮಾಡಿದ್ದರು ಅದಕ್ಕೆಲ್ಲಾ ಕಾರಣ ಶಿಕ್ಷಕರು ಎಂದು ಹೇಳಬಹುದು, ಈ ಮೂಲಕ‌ ಶಿಕ್ಷಕರು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದರು.

ವಿಶ್ವವನ್ನೇ ತನ್ನ ಆಳ್ವಿಕೆಗೆ ತಂದ ಅಲೆಗ್ಸಾಂಡರ್ ಗೆ ಒಂದು ಪ್ರಶ್ನೆ ಕೇಳಿದಾಗ ನನಗೆ ಜನ್ಮ ನೀಡಿದ್ದು ನಮ್ಮ ತಂದೆ ತಾಯಿ ಆದರೆ ಇಡೀ ವಿಶ್ವ ನನ್ನ ಕೈಗೆ ಬಂದಿರುವುದಕ್ಕೆ ಕಾರಣ ನನ್ನ ಗುರುಗಳು ಎಂದು ಹೇಳುತ್ತಾರೆ ಈ ಸನ್ನಿವೇಶವೇ ಹೇಳುತ್ತದೆ ಶಿಕ್ಷಕರ ಪ್ರಾಮುಖ್ಯತೆಯನ್ನು ಎಂದರು.

ರಾಧಾಕೃಷ್ಣನ್ ರವರು ರಾಷ್ಟ್ರಪತಿಯಾಗಿದ್ದಾಗ ನಿಮ್ಮ ಜೀವನದ ವಿಶೇಷ ದಿನ ಯಾವುದು ಎಂದು ಕೇಳುತ್ತಾರೆ, ಆಗ ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಸಾರೋಟಿನಲ್ಲಿ ರೈಲ್ವೆ ನಿಲ್ದಾಣದವರೆಗೆ ಕರೆದುಕೊಂಡು ಹೋದ ಘಟನೆಯನ್ನು ನನ್ನ ಜೀವನದ ವಿಶೇಷದಿನ ಎಂದು ಹೇಳುತ್ತಾರೆ ಎಂದರು.

ಈ ಮೂಲಕ ದೇಶದ ಸದೃಢ ಮಕ್ಕಳ ಭವಿಷ್ಯವನ್ನು ನಿರ್ಮಾಣ ಮಾಡಲು ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್, ಮುಡಾ ಅಧ್ಯಕ್ಷ ಶ್ರೀನಿವಾಸ್ , ಡಿಡಿಪಿಐ ಜವರೇಗೌಡ, ಇಒ ಚಂದ್ರಶೇಖರ್, ಬಿಇಓ ಚಂದ್ರಕಾಂತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ಕೇಸನ್ನು ನಾವು ಯಾರು ಬೆಂಬಲಿಸಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ : ಬಿ.ವೈ ವಿಜಯೇಂದ್ರ

ಹುಬ್ಬಳ್ಳಿ : ಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ , : ನಾವು ಯಾರು ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಬೆಂಬಲಿಸಿಲ್ಲ… Read More

May 4, 2024

ಶಕುನಿ ಪಾತ್ರಧಾರಿ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಸಾವು

ನಿನ್ನೆ ರಾತ್ರಿ 72ರ ವಯಸ್ಸಿನ ಎನ್.ಮುನಿಕೆಂಪಣ್ಣ ಶಕುನಿ (Shakuni) ವೇಷದಲ್ಲಿ ವೇದಿಕೆಗೆ ಬಂದು ಪಾತ್ರ ನಿರ್ವಹಿಸುತ್ತಲೇ ವೇದಿಕೆಯ ಮೇಲೆ ಕುಸಿದು… Read More

May 4, 2024

ಬಿಜೆಪಿಯವರು ಏಕೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡುತ್ತಿಲ್ಲ ?ಡಿ.ಕೆ.ಶಿವಕುಮಾರ್

ಬಾಗಲಕೋಟೆ : ಡಿಸಿಎಂ ಡಿ.ಕೆ.ಶಿವಕುಮಾರ್ , ಬಿಜೆಪಿ ಮುಖಂಡರು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ? ಹೆಣ್ಣುಮಕ್ಕಳಿಗೆ ಸಾಂತ್ವನ… Read More

May 4, 2024

ರೇವಣ್ಣ ಅಪಹರಣ ಕೇಸ್‌ : ಎಸ್‌ಐಟಿ ವಿಶೇಷ ತಂಡದಿಂದ 40 ಕಡೆ ರೇಡ್‌

ಬೆಂಗಳೂರು : ನೆನ್ನೆ ವಿಶೇಷ ತನಿಖಾ ತಂಡ (ಎಸ್‌ಐಟಿ) , ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು… Read More

May 4, 2024

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024