March 11, 2026

Newsnap Kannada

The World at your finger tips!

crime

ಹೆಂಡತಿಯೊಂದಿಗೆ ಸ್ವಾಮೀಜಿ ಸಂಬಂಧ : ಗಂಡ ಕುಡುಕ – ಹಣದಾಹಿ : ಸುಳ್ಳು ಆರೋಪ – ಪತ್ನಿ

Spread the love

ದಾವಣಗೆರೆ ಜಿಲ್ಲೆಯ ಅವರಗೊಳ್ಳ ರೇಣುಕಾಶ್ರಮದ ಓಂಕಾರ ಶಿವಾಚಾರ್ಯ ಸ್ವಾಮಿಗಳ ವಿರುದ್ಧ ಅಕ್ರಮ ಸಂಬಂಧ ಆರೋಪ ಕೇಳಿಬಂದಿದೆ.

ಚಂದ್ರಶೇಖರ್ ಎಂಬುವವರು ನನ್ನ ಪತ್ನಿಯನ್ನು ಸ್ವಾಮೀಜಿಗಳು ಕಳೆದ ಒಂದೂವರೆ ವರ್ಷಗಳಿಂದ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ವಿರುದ್ಧದ ಆರೋಪದ ಬಗ್ಗೆ ಚಂದ್ರಶೇಖರ್​ ಪತ್ನಿ ಸ್ಪಷ್ಟನೆ ನೀಡಿ, ನನ್ನ ಪತಿ (ಚಂದ್ರಶೇಖರ್) ಕುಡಿತದ ಚಟ ಬಿಡಲಿ ಅಂತ ಸ್ವಾಮೀಜಿ ಬಳಿ ಕರೆದೊಯ್ದಿದ್ದೆ. ಕುಡಿತದ ಚಟ, ಡ್ರಗ್ಸ್​​ಗೆ ಅಡಿಕ್ಟ್​​​​ ಆಗಿದ್ದ ಪತಿ ಕಿರುಕುಳ ಕೊಡುತ್ತಿದ್ದರು

ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿಸಿ ಕುಡಿತ ಬಿಡಲು ಹೇಳಿದ್ದರು ನಾನು ಅವರ ಹತ್ತಿರ ಪೂಜೆ ಮಾಡಿಸಲು ಹೋಗ್ತಿದ್ದೆ. ಇದನ್ನು ನೆಪವಾಗಿಸಿ ಅವರ ವಿರುದ್ಧ ಆರೋಪ ಮಾಡಿದ್ದಾನೆ. ಮಂಡ್ಯ ಮೂಡಾದ 5 ಕೋಟಿ ರು ಹಗರಣ : ತೀರ್ಪಿನಲ್ಲಿ ಐವರ ಹೆಸರು ಬಹಿರಂಗ : ಮೋಸ ಮಾಡಿದ್ದು ಹೇಗೆ ?

ಸ್ವಾಮೀಜಿಯಿಂದ 30 ಲಕ್ಷ ರು ಕೊಡಿಸುವಂತೆ ಡಿಮ್ಯಾಂಡ್ ಮಾಡಿದ್ದ. ಆತನಿಗೆ ಹಣ ನೀಡದೆ ಇರೋದ್ದಕ್ಕೆ ಸುಳ್ಳು ಆರೋಪ ಮಾಡ್ತಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾಳೆ. ಅಲ್ಲದೇ ಶಿವಮೊಗ್ಗ ವಿದ್ಯಾನಗರ ಠಾಣೆಯಲ್ಲಿ ಪತಿ ವಿರುದ್ಧ ದೂರು ನೀಡಿದ್ದಾಳೆ.

error: Content is protected !!