April 18, 2025

Newsnap Kannada

The World at your finger tips!

, suicide, harrasment , crime

ಸರ್ವೆಯರ್ ಆತ್ಮಹತ್ಯೆ ಪ್ರಕರಣ – ಹನಿಟ್ರ್ಯಾಪ್ ಗೆ ಬಲಿ ?

Spread the love

ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಫೆಬ್ರವರಿ 13 ರಂದು ಆತ್ಮಹತ್ಯೆ ಮಾಡಿಕೊಂಡ ಸರ್ವೆಯರ್ ಶಿವಕುಮಾರ್ ಅವರ ಸಾವಿನ ರಹಸ್ಯ ಬಹಿರಂಗಗೊಂಡಿದೆ. ಕಚೇರಿಯಲ್ಲಿ ಪತ್ತೆಯಾದ ಡೆತ್ ನೋಟ್ ಅಲ್ಲಿ ಹನಿಟ್ರ್ಯಾಪ್‌ಗೆ ಒಳಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ.

ಹನಿಟ್ರ್ಯಾಪ್‌ಗೆ ಬಲಿಯಾದರಾ ಶಿವಕುಮಾರ್?
ಸರ್ವೆಗೆ ಹೋದ ವೇಳೆ ಪರಿಚಯವಾದ ಮಹಿಳೆ ಜೊತೆಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು. ಮಹಿಳೆ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದರು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ವಿಚಾರ ಎಫ್ಐಆರ್‌ನಲ್ಲೂ ಪ್ರಸ್ತಾಪಿಸಲಾಗಿದೆ.

ಶಿವಕುಮಾರ್ ಈಗಾಗಲೇ ಆಕೆಗೆ 1.5 ಲಕ್ಷ ರೂ. ನೀಡಿದ್ದರು, ಆದರೂ ಮತ್ತೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು.

ಸೇವಾ ವಿಚಾರದಿಂದಲೂ ಮಾನಸಿಕ ಒತ್ತಡ?
ಶಿವಕುಮಾರ್ ಅವರು ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದರು. ಸರಿಯಾಗಿ ಸರ್ವೆ ಮಾಡಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು.

ಅಮಾನತ್ತು ಆಗುವ ಭಯದಿಂದ ಕಳೆದ ಎಂಟು ತಿಂಗಳಿನಿಂದ ಖಿನ್ನತೆಯಲ್ಲಿ ಇದ್ದರು. ಈಗಾಗಿಯೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದರು.

ಕುಟುಂಬದ ಪರಿಸ್ಥಿತಿ:
ಮೃತ ಶಿವಕುಮಾರ್ ಅವರ ಪತ್ನಿ ಮತ್ತು ಮಗಳು ಬೆಂಗಳೂರಿನಲ್ಲಿ ವಾಸವಿದ್ದರು.
ಮೂಲತಃ ತುಮಕೂರು ಜಿಲ್ಲೆಯ ಬೆಣ್ಣೆಹಳ್ಳದವರು ಆಗಿದ್ದ ಅವರು, ಕಳೆದ ಆರು ವರ್ಷಗಳಿಂದ ಮೂಡಿಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಇದನ್ನು ಓದಿ –ನಾಳೆಯಿಂದ CBSE 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಆರಂಭ – ವಿದ್ಯಾರ್ಥಿಗಳಿಗೆ ಕಡ್ಡಾಯ ನಿಯಮಗಳು

ಈ ಪ್ರಕರಣದ ಬಗ್ಗೆ ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!