Trending

ಬೇರ್ಸ್ಟೋವ್ ಅದ್ಭುತ ಆಟ; ಕ್ಯಾಪಿಟಲ್ಸ್ ನ್ನು ಪರಾಭವಗೊಳಿಸಿದ ರೈಸರ್ಸ್

ಇಂದು ದುಬೈನ ಅಬು ಧಾಬಿಯ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 20-20ಯ 11ನೇ ದಿನದ ಮ್ಯಾಚ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ತನ್ನ ಗೆಲುವಿನ ಖಾತೆಯನ್ನು ತೆರೆಯಿತು.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಡಲ್ಲಿ ಕ್ಯಾಪಿಟಲ್ಸ್ , ಸನ್ ರೈಸರ್ಸ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ನಾಯಕ ಡಿ ವಾರ್ನರ್ ಹಾಗೂ ಉಪನಾಯಕ ಜೆ. ಬೇರ್ಸ್ಟೋವ್ ಅವರು ಉತ್ತಮ ಆಟ ಪ್ರಾರಂಭ ಮಾಡಿದರು. ಡಿ. ವಾರ್ನರ್ 33 ಬೌಲ್ ಗಳಿಗೆ 45 ರನ್ ಹಾಗೂ ಜೆ. ಬೇರ್ಸ್ಟೋವ್ 48 ಬೌಲ್‌ಗಳಿಗೆ 53 ರನ್‌ ಗಳಿಸಿ ತಂಡವನ್ನು ಭದ್ರಗೊಳಿಸಿದರು. ಆದರೆ ಬೇರ್ಸ್ಟೋವ್ನಂತರ ಬಂದ ನಿರೀಕ್ಷಿತ ಅಟಗಾರ ಮನೀಶ್ ಪಾಂಡೆ ಕೇವಲ 3 ರನ್ ಗಳಿಗೆ ಪೆವಿಲಿಯನ್ ಸೇರಿದರು. ಕೆ. ವಿಲಿಯಮ್ಮನ್ 26 ಬೌಲ್ ಗಳಿಗೆ 41 ರನ್ ಗಳ ಬಿರುಸಿನ ಆಟವಾಡಿ ತಂಡ 150ರ ಗಡಿಯನ್ನು ದಾಟುವಂತೆ ಮಾಡಿದರು. ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು.

ಹೈದರಾಬಾದ್ ತಂಡ ಕೊಟ್ಟ ಗುರಿಯನ್ನು ಬೆನ್ನತ್ತಿ ಹೊರಟ ಡೆಲ್ಲಿ ಗುರಿಯನ್ನು ಮುಟ್ಟಲಿಲ್ಲ. ಡೆಲ್ಲಿ ತಂಡದ ಆರಂಭಿಕ ಆಟಗಾರರಾಗಿ ಪೃಥ್ವಿ.ಶಾ ಅವರು ಕೇವಲ 2 ರನ್ ಗಳಿಗೇ ಪೆವಿಲಿಯನ್ ಸೇರಿದರು. ಶಾ ನಂತರ ಬಂದ ಆಟಗಾರರಾದ ಶಿಖರ್ ಧವನ್ (31 ಎಸೆತಗಳಿಗೆ 34 ರನ್) ಹಾಗೂ ಎಸ್, ಐಯ್ಯರ್ (21 ಎಸೆತಗಳಿಗೆ 17 ರನ್) ಹಗುಉ ಆರ್. ಪಂತ್ (27 ಎಸೆತಗಳಿಗೆ 28 ರನ್ ಗಳಿಸಿ ತಂಡವನ್ನು ಉಳಿಸಲು ಪ್ರಯತ್ನಿಸಿದರಾದರೂ ಸಾಧ್ಯಗಲಿಲ್ಲ. ಹೈದರಾಬಾದ್ ತಂಡದ ಭುವನೇಶ್ವರ್ ಕುಮಾರ್ ಹಾಗೂ ರಶೀದ್ ಖಾನ್ ಅವರ ಬಿರುಸಿನ ಬೌಲಿಂಗ್ ದಾಳಿಯನ್ನು ಡೆಲ್ಲಿ ತಂಡದವರಿಂದ ತಡೆದುಕೊಳ್ಳಲಾಗಲಿಲ್ಲ.ತಂಡ 20 ಓವರ್ ಗಳಲ್ಲಿ ತಂಡ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.

ಹೈದರಾಬಾದ್ ತಂಡವು ಡೆಲ್ಲಿ ವಿರುದ್ಧ ಒಟ್ಟು 15 ರನ್ ಗಳ ಜಯವನ್ನು ಸಾಧಿಸಿತು.

Team Newsnap
Leave a Comment
Share
Published by
Team Newsnap

Recent Posts

ಕ್ರೇಜಿವಾಲ್ ಗೆ ಮಧ್ಯಂತರ ಜಾಮೀನು ಪರಿಗಣನೆಗೆ ಸುಪ್ರೀಂ ಸೂಚನೆ

ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌… Read More

May 3, 2024

ಬಿಜೆಪಿ ಜೊತೆಗಿನ ಮೈತ್ರಿ ಸದ್ಯಕ್ಕೆ ನನಗೆ ಮುಖ್ಯ ಅಲ್ಲ: ಎಚ್ ಡಿ ಕೆ

ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More

May 3, 2024

ಹೆಚ್.ಡಿ ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ದಾಖಲು

ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್‍ಐಆರ್… Read More

May 3, 2024

ರಾಮನಗರ : ಐಜೂರಿನಲ್ಲಿ ಕರಡಿ ಪ್ರತ್ಯಕ್ಷ

ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More

May 3, 2024

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024