ಸಂಸದೆ ಸುಮಲತಾ ಬಿಜೆಪಿಗೆ ಈಗ ಬಿಸಿ ತುಪ್ಪ. ಅದೇ ರೀತಿ ಸುಮಲತಾರಿಗೂ ಸಹ ಒಂದು ರೀತಿಯಲ್ಲಿ ಬಿಜೆಪಿ ಅನಿವಾರ್ಯವೂ ಆಗಿದೆ.
ಮಂಡ್ಯ ರಾಜಕಾರಣ ಎಂದರೆ ರಾಜ್ಯದಲ್ಲಿ ಸಂಚಲನಕ್ಕೆ ನಾಂದಿ ಹಾಡುವ ಜಿಲ್ಲೆ. ಬಿಜೆಪಿಯ ನಾಯಕರು ಹಳೇ ಮೈಸೂರು ಪ್ರಾಂತದಲ್ಲಿ ಪಕ್ಷವನ್ನು ಬಲಪಡಿಸುವ ಸಂಕಲ್ಪ ಮಾಡಿದ ನಂತರ ಮಂಡ್ಯ ಜಿಲ್ಲೆಯಿಂದಲೇ ಆಪರೇಷನ್ ಗೆ ಕೈ ಹಾಕಿದ್ದಾರೆ.
ಬಿಜೆಪಿಗೆ ಸುಮಾಲತಾ ಮತ್ತು ಸುಮಲತಾಗೆ ಬಿಜೆಪಿ ಅನಿವಾರ್ಯವಾಗಿದೆ. ಆ ಮಾತು ಬೇರೆ. ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಕ್ಷವೊಂದರ ಅವಶ್ಯಕತೆ ಸಂಸದೆಗೆ ಇದ್ದೇ ಇದೆ. ಹೀಗಾಗಿ ಬಿಜೆಪಿಗೆ ಸೇರಿಕೊಳ್ಳುವ ಅಥವಾ ಅವರನ್ನು ಸೇರಿಸಿಕೊಳ್ಳುವ ತೆರೆ ಮರೆಯ ಕಸರತ್ತು ಈಗ ಎಲ್ಲವೂ ಬಹಿರಂಗವಾಗಿದೆ.
ಮಂಡ್ಯದಲ್ಲಿ ಬಿಜೆಪಿ ಕಟ್ಟುವುದು ಸುಲಭದ ಮಾತಲ್ಲ. ಜೆಡಿಎಸ್ – ಕಾಂಗ್ರೆಸ್ಸಿನ ಭುಜ ಬಲದ ಶಕ್ತಿ ಕುಂದಿಸಿ ಬಿಜೆಪಿಗೆ ಬಲ ತುಂಬುವ ಧೀಮಂತ ವರ್ಚಸ್ಸು ಇರುವುದು ಸಂಸದೆ ಸುಮಲತಾಗೆ ಮಾತ್ರ ಎನ್ನುವುದನ್ನು ಮನದಟ್ಟು ಮಾಡಿಕೊಂಡಿರುವ ಬಿಜೆಪಿ ವರಿಷ್ಠರು ಸಂಸದೆಗೆ ಮಣಿಹಾಕುವ ನಿರ್ಧಾರ ಮಾಡದೇ ಇರಲಾರರು. ಆದರೆ ಮೇಡಂ ಹಾಕಿರುವ ಷರತ್ತು ಗಳು ತಲೆ ತಿರುಗುವಂತೆ ಮಾಡಿವೆ.
ಈ ಕಾರಣಕ್ಕಾಗಿಯೇ ಸಂಸದೆ ಸುಮಲತಾ ಕೂಡ ಮೂರು ಷರತ್ತುಗಳನ್ನು ಹಾಕಿದ್ದಾರೆಂದು ತಿಳಿದು ಬಂದಿದೆ
ಬಿಜೆಪಿ ಎಲ್ಲಾ ನಾಯಕರು ನನ್ನನ್ನೇ ನಾಯಕಿ ಎಂದು ಒಪ್ಪಿಕೊಳ್ಳಬೇಕು ಎಂಬುದು ಪರೋಕ್ಷ ಷರತ್ತುಗಳು, ಮೂಲ ಬಿಜೆಪಿ ನಾಯಕರಿಗೆ ಹಾಗೂ ಬಾವುಟ ಕಟ್ಟಿ ಜಿಲ್ಲೆಯಲ್ಲಿ ಬಿಜೆಪಿ ಹೆಸರು ಉಳಿಸಿದ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿದೆ.
ಒಟ್ಟಾರೆ ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಕ್ಕೆ ಫಲ ಸಿಗಬೇಕು. ಜಿಲ್ಲೆಯಲ್ಲಿ ಕನಿಷ್ಠ ನಾಲ್ಕು ಮಂದಿ MLA ಗಳನ್ನು ಗೆಲ್ಲಿಸಬೇಕು ಎಂಬ ಸಂಕಲ್ಪವನ್ನು ಬಿಜೆಪಿ ನಾಯಕರು ಮಾಡಿದ್ದಾರೆ.
ಈ ಕಾರಣಕ್ಕಾಗಿ ಮೇ 3-4 ರಂದು ರಾಜ್ಯಕ್ಕೆ ಭೇಟಿ ನೀಡುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸುಮಲತಾ ಅವರಿಗೆ ಭೇಟಿ ಮಾಡಿಸಿ ಮಾತುಕತೆ ಮಾಡಿಸುವ ಲೆಕ್ಕಾಚಾರವೂ ನಡೆದಿದೆ.
ಲೆಕ್ಕಾಚಾರ ಹಾಗೂ ಬಿಜೆಪಿ ಸೇರ್ಪಡೆ ಬಗ್ಗೆ ಖಡಾಖಂಡಿತವಾಗಿ ಹೇಳಿರುವ ಸಂಸದೆ ಸುಮಲತಾ, ನಾನು ಎಲ್ಲಿ ಬಿಜೆಪಿ ಸೇರುವೆ ಅಂತ ಹೇಳಿದ್ದೇನೆ. ಜಿಲ್ಲೆಯ ಜನರ ಅಭಿಪ್ರಾಯ ಪಡೆದ ನಂತರ ಸೂಕ್ತ ನಿರ್ಧಾರ ಮಾಡುವೆ. ಅಲ್ಲಿಯವರೆಗೂ ಯಾವುದೇ ಲೆಕ್ಕಾಚಾರ, ಊಹಾಪೋಹ ಬೇಡ ಎಂದಿದ್ದಾರೆ.
ನವದೆಹಲಿ : ಲೋಕಸಭೆ ಚುನಾವಣೆಯನ್ನು ಹಿನ್ನಲೆಯಲ್ಲಿ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್… Read More
ರಾಯಚೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೀವ್ರ ಪೇಚಿಗೆ ಸಿಲುಕಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ… Read More
ಮೈಸೂರು : ಮೈಸೂರು ಜಿಲ್ಲೆ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗನಿಂದ ರೇವಣ್ಣ ವಿರುದ್ಧ ದೂರು ದಾಖಲಿಸಲಾಗಿದ್ದು ,ಎಫ್ಐಆರ್… Read More
ರಾಮನಗರ : ಮೂರು ದಿನಗಳ ಹಿಂದೆ ಕರಡಿಯೊಂದು ಐಜೂರಿನ ಜನವಸತಿ ಪ್ರದೇಶದಲ್ಲಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.… Read More
ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More
ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More
This website uses cookies.
Leave a Comment