April 2, 2025

Newsnap Kannada

The World at your finger tips!

crime scene

ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿದ್ದ 30 ಲಕ್ಷ ದೋಚಿದ ದುಷ್ಕರ್ಮಿಗಳು

Spread the love

ಬೆಂಗಳೂರು: ಗ್ಯಾಸ್ ಕಟರ್ ಬಳಸಿ ಎಟಿಎಂನಲ್ಲಿ (ATM) ಕಳ್ಳತನ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ರಾಸ್, ಸೂಲಿಬೆಲೆದಲ್ಲಿ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂನ ಶೆಟರ್ ಕತ್ತರಿಸಿ, ದುಷ್ಕರ್ಮಿಗಳು 30 ಲಕ್ಷ ರೂಪಾಯಿಗೂ ಹೆಚ್ಚು ಹಣ ದೋಚಿದ್ದಾರೆ.

ಕುತಂತ್ರ ರೂಪಿಸಿ ಎಟಿಎಂ ದರೋಡೆ
ಕಳ್ಳರು ಮೊದಲಾಗಿ ಎಟಿಎಂ ಒಳಗೆ ಮುಖದ ಗುರುತು ಸಿಸಿಟಿವಿಯಲ್ಲಿ ಬರುವಂತೆ ತಡೆಯಲು ಕ್ಯಾಮೆರಾಗಳಿಗೆ ಬಣ್ಣದ ಸ್ಪ್ರೇ ಬಳಿಸಿದ್ದಾರೆ. ಬಳಿಕ, ಆಂಧ್ರ ಪ್ರದೇಶ ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದು, ಅದರಿಂದಲೇ ಗ್ಯಾಸ್ ಕಟರ್ ಬಳಸಿ ಎಟಿಎಂ ಶೆಟರ್ ಕತ್ತರಿಸಿ ಹಣ ಕಳ್ಳತನ ಮಾಡಿದ್ದಾರೆ.

ಹೊಸಕೋಟೆ ಮಾರ್ಗವಾಗಿ ಪರಾರಿಯಾದ ಖದೀಮರು
ಎಟಿಎಂ ದರೋಡೆ ಬಳಿಕ, ದುಷ್ಕರ್ಮಿಗಳು ಹೊಸಕೋಟೆ ಮಾರ್ಗವಾಗಿ ಪರಾರಿಯಾಗಿದ್ದಾರೆ. ಈ ಕುರಿತಂತೆ ಮಾಹಿತಿ ತಿಳಿದ ಕೂಡಲೇ, ಬೆಂಗಳೂರು ಗ್ರಾಮಾಂತರ ಎಸ್.ಪಿ ಸಿ.ಕೆ. ಬಾಬಾ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದನ್ನು ಓದಿ –ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳ ನಿರ್ಧಾರ – ಶೀಘ್ರದಲ್ಲೇ ಅಧಿಕೃತ ಘೋಷಣೆ!

ಪೊಲೀಸರ ತನಿಖೆ ಆರಂಭ
ಘಟನೆಯ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ದುಷ್ಕರ್ಮಿಗಳನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!