ಜಯನಗರ ಕ್ಷೇತ್ರದ ಜನರ ಪ್ರಾಣ ಉಳಿಸಿ ಎಂದು ಜಯನಗರ ವಾರ್ ರೂಂ ಎದುರಿನ ರಸ್ತೆ ಬದಿಯ ಫುಟ್ಪಾತ್ ಮೇಲೆ ಕುಳಿತು ಮೌನ ಧರಣಿ ಆರಂಭಿಸಿದ್ದಾರೆ ಶಾಸಕಿ ಸೌಮ್ಯರೆಡ್ಡಿ.
ನಮ್ಮ ಕ್ಷೇತ್ರದ ಜನರಿಗೆ ಬೆಡ್ ಸಿಗ್ತಿಲ್ಲ, ವಾರ್ ರೂಂಗೆ ಕೇಳಿದರೆ ಹಾಸಿಗೆ ಕೊಡುತ್ತಿಲ್ಲ. ಅಮಾಯಕ ಜನರ ಪ್ರಾಣ ರಕ್ಷಣೆ ಮುಖ್ಯ, ನನ್ನ ಕ್ಷೇತ್ರದ ಜನರ ಪ್ರಾಣ ಉಳಿಸಬೇಕು, ಹೀಗಾಗಿ ಕೈಲಾದಷ್ಟು ಹೋರಾಡುತ್ತಿದ್ದೇನೆ, ನಮಗೆ ನ್ಯಾಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.