ಜಾನಪದ ಗಾಯನದಿಂದಲೇ ಫೇಮಸ್ ಆಗಿರುವ ಸೋಜುಗದ ಸೂಜಿ ಮಲ್ಲಿಗೆ … ಖ್ಯಾತಿಯ ಅನನ್ಯ ಭಟ್ ಗಾಯನ ಜೊತೆಗೆ ಇನ್ನು ಮುಂದೆ ಬಣ್ಣ ಹಚ್ಚಿ ನಾಯಕ ನಟಿಯಾಗಿ ನಟಿಸುವುದಲ್ಲದೇ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಕೂಡ ಮಾಡಲಿದ್ದಾರೆ.
ಕುಂದಾಪುರ, ಬೈಂದೂರು ಭಟ್ಕಳ ದಲ್ಲಿ ನಡೆದ ನೈಜ ಘಟನೆ ಯನ್ನು ಆಧರಿಸಿ ಹೆಣದಿರುವ ಸೇನಾಪುರ ಎಂಬ ಚಿತ್ರದಲ್ಲಿ ಪ್ರಧಾನ ಪಾತ್ರ ದಲ್ಲಿ ನಟಿಸಲಿದ್ದಾರೆ.
ಗುರು ಸವನ್ ನಿರ್ದೇಶನದ ಈಗಿನ ಚಿತ್ರದಲ್ಲಿ ಅಮಿತ್ ಕುಮಾರ್ ರಾಹುಲ್ ದೇವ್ ನಟಿಸಲಿದ್ದಾರೆ.
ಕೆಜಿಎಫ್ ನ ಹಾಡಿಗೆ ಸೈಮಾ ಪ್ರಶಸ್ತಿ ಪಡೆದ ಅನನ್ಯ ಭಟ್ ಮೂರು ಚಿತ್ರ ಗಳಲ್ಲಿ ನಟಿಸಿದ್ದರು. ಈಗ ಸೇನಾಪುರ ಚಿತ್ರ ದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅರಸಿ ಬಂದಿದೆ.