ಮಗನನ್ನು ಕೊಂದ ಅಳಿಯ : ಮನನೊಂದ ತಾಯಿ ನೇಣಿಗೆ ಶರಣು

Team Newsnap
1 Min Read

ಮೈಸೂರು : ನಗರದ ಕೂರ್ಗಳ್ಳಿಯಲ್ಲಿ ಪುತ್ರನ ಅಗಲಿಕೆ ನೋವಿನಿಂದ ತಾಯಿ ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ .

ಭಾಗ್ಯಮ್ಮ (46) ಪುತ್ರನ ಅಗಲಿಕೆ ತಾಳಲಾರದೆ ಆತ್ಮಹತ್ಯೆ ಶರಣಾಗಿರುವ ದುರ್ದೈವಿಯಾಗಿದ್ದು, ನಿನ್ನೆ ಮನೆಯಲ್ಲಿ (Home) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಘಟನೆಯ ವಿವರ :

ಮೃತ ಭಾಗ್ಯಮ್ಮ ತನ್ನ ಮಗಳನ್ನು ರವಿಚಂದ್ರನ್ ಎಂಬಾತನಿಗೆ ಮದುವೆ ಮಾಡಿಕೊಳಲಾಗಿದ್ದು ,ಆದರೆ ಅಳಿಯ ರವಿಚಂದ್ರನ್ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು ಮತ್ತು ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು .

ಈ ವೇಳೆ ತಂಗಿಯ ಮೇಲೆ ಹಲ್ಲೆ ಮಾಡುವುದನ್ನ ನೋಡಲಾಗದೆ ಅಭಿಷೇಕ್ ಜಗಳ ಬಿಡಿಸಲು ಮಧ್ಯ ಪ್ರವೇಶ ಮಾಡಿದ್ದು ,ಈ ವೇಳೆ ಅಳಿಯ ರವಿಚಂದ್ರನ್ ಚಾಕುವಿನಿಂದ ಇರಿದು ಬಾಮೈದ ಅಭಿಷೇಕ್ ನನ್ನು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.ವಿಜಯ್ ಮಲ್ಯಗೆ ಜಾಮೀನು ರಹಿತ ಬಂಧನ ವಾರೆಂಟ್

ಜೂನ 9 ರಂದು ಮೈಸೂರಿನ ಕುವೆಂಪು ನಗರದಲ್ಲಿ ಘಟನೆ ನಡೆದಿದ್ದು ,ಮಗನ ಸಾವಿನ ಬಳಿಕ ಅಂದಿನಿಂದ ಮಗನ ನೆನಪಲ್ಲಿಯೇ ತಾಯಿ ಭಾಗ್ಯಮ್ಮ ಖಿನ್ನತೆಗೆ ಜಾರಿ ನಿನ್ನೆ ಮನೆಯಲ್ಲಿಯೇ ಭಾಗ್ಯಮ್ಮ ಅವರು ನೇಣು ಬೀಗಿದುಕೊಂಡು ಸಾವನ್ನಪ್ಪಿದ್ದಾರೆ .

Share This Article
Leave a comment