February 19, 2026

Newsnap Kannada

The World at your finger tips!

siddarama

ಪತ್ನಿಯ ನಿರ್ಧಾರದಿಂದ ಸಿಎಂ ಸಿದ್ದರಾಮಯ್ಯ ಆಶ್ಚರ್ಯ: “ರಾಜಕೀಯ ಷಡ್ಯಂತ್ರದಿಂದ ಕಂಗಾಲು “

Spread the love

ಬೆಂಗಳೂರು: ಸಿಎಂ ಸಿದ್ದರಾಮಯ್ಯ, ತಮ್ಮ ವಿರುದ್ಧ ನಡೆಯುತ್ತಿರುವ ರಾಜಕೀಯ ಚಲನೆಗಳಿಂದ ತೀವ್ರ ಪರಿಣಾಮಕ್ಕೆ ಒಳಗಾದ ಪತ್ನಿ ಪಾರ್ವತಿ, 14 ಸೈಟ್‌ಗಳನ್ನು ಮರಳಿ ಮುಡಾ (MUDA) ಗೆ ನೀಡಿರುವ ನಿರ್ಧಾರ ಕೈಗೊಂಡಿದ್ದು, ಇದರಿಂದ ನನಗೂ ಆಶ್ಚರ್ಯ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ದ್ವೇಷ ರಾಜಕಾರಣ, ಸತ್ಯಮೇವ ಜಯತೆ” ಎಂಬ ಹ್ಯಾಶ್‌ಟ್ಯಾಗ್‌ ಬಳಸಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

“ನನ್ನ ವಿರುದ್ಧ ಇರುವ ರಾಜಕೀಯ ದ್ವೇಷಕ್ಕಾಗಿ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಸೃಷ್ಟಿಸಿ, ನನ್ನ ಕುಟುಂಬವನ್ನು ವಿವಾದದಲ್ಲಿ ತಳ್ಳಿ ಹಾಕಿರುವುದು ರಾಜ್ಯದ ಜನತೆಗೆ ಗೊತ್ತಿದೆ” ಎಂದು ಅವರು ಅಂದಾಜಿಸಿದ್ದಾರೆ.

“ನಾನು ಈ ಅನ್ಯಾಯದ ವಿರುದ್ಧ ಹೋರಾಡಬೇಕು ಎಂಬುದಾಗಿ ನಿರ್ಧರಿಸಿದ್ದೆ. ಆದರೆ, ನನ್ನ ಪತ್ನಿಯ ಮನಸ್ಸಿಗೆ ಹೊಡೆತ ತರುವಂತಹ ಈ ರಾಜಕೀಯ ಪಣವಾಗಿರುವುದಕ್ಕೆ ವಿಷಾದಿಸುತ್ತಿದ್ದೇನೆ. ಆದರೂ, ತನ್ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ” ಎಂದು ಸಿಎಂ ಹೇಳಿದ್ದಾರೆ.ಅಂತಾರಾಷ್ಟೀಯ ಕಾಫಿ ದಿನ

ಈ ಸುದ್ದಿಯಿಂದ ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಪರಿವರ್ತನೆಯುಂಟಾದ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಪತ್ನಿಯ ನಿರ್ಧಾರವನ್ನು ಮೆಚ್ಚಿದ್ದಾರೆ.

error: Content is protected !!