ಬೆಳಗಾವಿಯ ಸುವಣ೯ಸೌಧ ದಲ್ಲಿ ನಡೆದಿರುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಗೆಗಿನ ಚಚೆ೯ ಮೇಲೆ ಪಾಲ್ಗೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ ಮಸೂದೆಯ ನ್ಯೂನ್ಯತೆಗಳನ್ನು ಬಿಡಿಸಿಟ್ಟರು
ನಾನು ಲವ್ ಮಾಡಿ ಮದುವೆ ಆಗ್ತೇನೆ.. ಎಕ್ಸ್.. (ಮಾಜಿ).. ಇಲ್ಲ.. ಇಲ್ಲ.. ನನ್ನ ಬಿಡಿ, ನನಗೆ ವಯಸ್ಸಾಗಿದೆ. ನನ್ನ ಸುದ್ದಿ ಬಿಟ್ಬಿಡಿ.. ನನಗೆ ವಯಸ್ಸಾಗಿಬಿಟ್ಟಿದೆ’’ ಎಂದರು. ಆಗ ಸಿದ್ದರಾಮಯ್ಯರ ಈ ಮಾತು ಕೇಳಿಸಿಕೊಂಡ ಸದಸ್ಯರು ಜೋರಾಗಿ ನಕ್ಕರು.
ಮಾತಿನ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ.. ‘ಸಿದ್ದರಾಮಯ್ಯನವರು.. ವಯಸ್ಸಿಗೂ ಮತ್ತು ಪ್ರೀತಿಗೂ ಇಂಟರ್ಲಿಂಕ್ ಇರಲ್ವಾ?’ ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ.. ‘‘ಇಲ್ಲ ಪ್ರೀತಿ ಬೇರೆ, ಮದುವೆ ಬೇರೆ. ಎರಡಕ್ಕೂ ವ್ಯತ್ಯಾಸ ಇದೆ. ನಾನು ಹೇಳಿದ್ದು ಮದುವೆ.. ಪ್ರೀತಿ ಬೇರೆ.. ಪ್ರೀತಿಯನ್ನು ಯಾವ ವಯಸ್ಸಿಗೂ ಮಾಡಬಹುದು’’ ಅನ್ನೋ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಆಗ ಕಾಗೇರಿ ತಲೆ ಅಲ್ಲಾಡಿಸಿ ಮತ್ತೆ ನಕ್ಕರು
ಈ ವೇಳೆ ಸಚಿವ ಕೆಎಸ್ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯನವರೇ.. ನಿಮಗೆ ವಯಸ್ಸು ಆಗಿದೆ ಅಂತಾ ಯಾರು ಹೇಳಿದ್ದು?’’? ಎಂದು ಪ್ರಶ್ನೆ ಮಾಡಿದ್ರು.. ಅದಕ್ಕೆ ಸಿದ್ದರಾಮಯ್ಯ ‘‘ನಾನೇ ಅಂದ್ಕೊಂಡಿದ್ದೇನೆ’ ಅಂದರು. ಆಗ ಈಶ್ವರಪ್ಪ, ನಿಮ್ಮ ಮನೆಯವರು ಹೇಳಿಲ್ಲ ತಾನೇಎಂದು ಮತ್ತೆ ಪ್ರಶ್ನೆ ಮಾಡಿದ್ರು.. ‘‘ಇಲ್ಲ ಇಲ್ಲ ನಾನೇ ಹೇಳ್ತಿದ್ದೇನೆ’ ಎಂದರು.
ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ, ‘‘ನಿಮ್ಗೆ ವಯಸ್ಸಾಗಿದೆ ಅಂತಾ ಅನ್ಕೊಂಡಿಲ್ವಾ ಈಶ್ವರಪ್ಪನವ್ರೇ’’ ಎಂದು ಪ್ರಶ್ನೆ ಮಾಡಿದರು.
ಅದಕ್ಕೆ ಈಶ್ವರಪ್ಪ ತಮ್ಮ ಎರಡೂ ಕೈಗಳನ್ನು ಬಿಚ್ಚಿ ‘‘ಖಂಡಿತವಾಗಿಯೂ ಇಲ್ಲ’’ ಎಂದು ತಮಾಷೆ ಮಾಡಿದರು.ಆಗ ಮತ್ತೆ ಸದನ ನಗೆಗಡಲಲ್ಲಿ ತೇಲಿತು.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಮಹಿಷ ದಸರಾ ಕೂಗು ಕೇಳಿ ಬಂದಿದ್ದು ,ಈ ಬಾರಿಯೂ ಮಹಿಷ ದಸರಾ ವಿವಾದ… Read More
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿಯಾಗಿರುವ… Read More
ಮೈಸೂರು: ಸೆ. 24 ರಂದು ಸಂಜೆ 6 ಗಂಟೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ದಸರಾ ಮಹೋತ್ಸವ -2024 ರ ಯುವ… Read More
ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2024 ರ ಹಿನ್ನೆಲೆಯಲ್ಲಿ ದಸರಾ ಚಲನಚಿತ್ರೋತ್ಸವ ಪೋಸ್ಟರ್ ಗಳನ್ನು ಜಿಲ್ಲಾ… Read More
ಸ್ವಾವಲಂಬಿ ಸ್ತ್ರೀ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಅರ್ಹ ಮಹಿಳೆಯರು ಉಚಿತವಾಗಿ ಆಟೋ ರಿಕ್ಷಾ ಚಾಲನಾ ತರಬೇತಿಯನ್ನು ಪಡೆಯಲು ಮತ್ತು ಆದಾಯ… Read More
ಬೆಂಗಳೂರು : ಅಕ್ಟೋಬರ್ 3 ರಿಂದ 20 ತನಕ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಿಸಿದ್ದು ,ರಾಜ್ಯದ… Read More
This website uses cookies.
Leave a Comment