ಯಾಕೆ ಹಿಂಗೆ ಕಿತ್ತಾಡ್ತಾರೆ ಈ ಮಾಜಿ ಸಿಎಂಗಳು… ಟ್ವಿಟ್ಟರ್ ನಲ್ಲೂ ಟಾಕ್ ವಾರ್ …

Team Newsnap
1 Min Read

ಮೈತ್ರಿ ಸರ್ಕಾರ ಕಿತ್ತು ಹೋಗಿ ಸಂಬಂಧ ಹಳಸಲು ಆಗಿದೆ . ಆದೂ ಈ ಮಾಜಿ ಸಿಎಂ ಗಳ ಟಾಕ್ ವಾರ್ ಮಾತ್ರ ನಿಂತಿಲ್ಲ. ‌

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ನನ್ನ ಗೌರವ ಹಾಳಾಯ್ತು ಎಂಬ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ಹೇಳಿಕೆಗೆ ಇವತ್ತು
ಮಾಜಿ ಸಿಎಂ ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ಮತ್ತೆ ಟಾಂಗ್ ಕೊಟ್ಟಿದ್ದಾರೆ.

ಈ ವಿಷಯಕ್ಕೆ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಕುಮಾರಸ್ವಾಮಿಗೆ ಒಳ್ಳೆಯ ಇಮೇಜ್ ಇದ್ದಿದ್ದರೆ ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಹೇಳಿರುವ ಸಿದ್ದು ಆತನಿಗೆ ಯಾವುದೇ ಇಮೇಜ್ ಇಲ್ಲ ಎಂದು ಕುಟುಕಿದ್ದಾರೆ.

2004 ರಲ್ಲಿ ನಾನು ಜೆಡಿಎಸ್ ನಲ್ಲಿದ್ದೆ ಆಗ ಜೆಡಿಎಸ್ 59 ಸ್ಥಾನ ಗೆದ್ದಿತ್ತು. ನನ್ನನ್ನು ಪಕ್ಷದಿಂದ ವಜಾ ಮಾಡಿದ ಮೇಲೆ 28 ಸ್ಥಾನ ಬಂತು.

2013 ರ ಚುನಾವಣೆಯಲ್ಲಿ 40 ಸ್ಥಾನ, ಕಳೆದ ಚುನಾವಣೆಯಲ್ಲಿ ಜೆಡಿಎಸ್ 37 ಸ್ಥಾನ ಗೆದ್ದಿತ್ತು. ಹಾಗಾದರೆ ಎಲ್ಲಿದೆಯಪ್ಪಾ ಈ ಕುಮಾರಸ್ವಾಮಿ ಗೌರವ? ಜನರ ಬಳಿ ಗೌರವ ಉಳಿಸಿಕೊಂಡಿದ್ದರೆ 59 ರಿಂದ 28 ಸ್ಥಾನಕ್ಕೆ ಬರುತ್ತಿತ್ತೇ ಎಂದು ಹೆಚ್.ಡಿ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.

ನಾನು ಈ ಎಲ್ಲಾ‌ ಕಾರಣಗಳನ್ನು ಇಟ್ಟುಕಡೇ ಜೆಡಿಎಸ್, ಬಿಜೆಪಿ ಬಿ ಟೀಂ ಎನ್ನುವುದು ಹೇಳಿದ್ದು. ಅದು ಪ್ರತಿ ಬಾರಿಯೂ ನಿಜವಾಗುತ್ತದೆ.

ಮೃಧು ಧೋರಣೆ ಇದ್ದೇ ಇದೆ:

ಜೆಡಿಎಸ್ ನವರು ಬಿಜೆಪಿ ಬಗ್ಗೆ ಸದಾ ಮೃಧು ಧೋರಣೆ ಹೊಂದಿದ್ದಾರೆ. ಅದಕ್ಕೆ ಬಿಜೆಪಿಯ ಬಿ ಟೀಮ್ ಎನ್ನುವುದು. ಹಿಂದಿನ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ಹೆಚ್.ಡಿ ಕುಮಾರಸ್ವಾಮಿಗೆ ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿ, ಮೊದಲ ಸುತ್ತಿನ ಮಾತುಕತೆ ನಡೆಸಿದ್ದು ಕಾಂಗ್ರೆಸ್ ಹೈಕಮಾಂಡ್, ನಾನಲ್ಲ ಎಂದಿದ್ದಾರೆ.

37 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದರು. ಇದರಲ್ಲಿ ಟ್ರ್ಯಾಪ್ ಎಲ್ಲಿಂದ ಬಂತು ಎಂದು ಟ್ವಿಟ್ಟರ್ ನಲ್ಲಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

Share This Article
Leave a comment