January 29, 2026

Newsnap Kannada

The World at your finger tips!

sid

ಒಂದೇ ವೇದಿಕೆಯಲ್ಲಿ‌ ಸಿದ್ದರಾಮಯ್ಯ. ಸಚಿವ ಈಶ್ವರಪ್ಪ

Spread the love

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವತಿಯಿಂದ ನಡೆದ ಸಭೆಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದ ಸಮಾಲೋಚನಾ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಭಾನುವಾರ ಕಾಣಿಸಿಕೊಂಡರು. ಸಮಾಲೋಚನೆಯ ಸಂದರ್ಭದಲ್ಲಿ ಅವರಿಬ್ಬರೂ ಪರಸ್ಪರ ಮಾತುಕತೆಯನ್ನೂ ಆಡಿದರು.

ಈ ಹಿಂದೆಯೂ ನಡೆದ ಕೆಲವು ಸಮಾವೇಶಗಳಲ್ಲಿ‌ ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ವೇದಿಕೆಯನ್ನು ಹೊಚಿಕೊಂಡಿದ್ದರು. ಆಗೆಲ್ಲ ಅವರು ರಾಜಕೀಯವೇ ಬೇರೆ, ಸ್ನೇಹವೇ ಬೇರೆ ಎಂದಿದ್ದರು. ಇಂದೂ ಸಹ ಅದೇ ಸ್ನೇಹಮಯ ಮಾತುಕತೆ ಅವರಿಬ್ಬರಲ್ಲೂ ಇತ್ತು.

ಸಭೆಯಲ್ಲಿ ವಿವಿಧ ಸಮುದಾಯಗಳ ಮಠಾಧೀಶರು, ಮಾಜಿ‌ ಸಚಿವ ಹೆಚ್.ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ನಂಜುಂಡಿ ಮುಂತಾದವರು ಇದ್ದರು.

error: Content is protected !!