ಪ್ಯಾಟ್ ಶಸ್ತ್ರ ಚಿಕಿತ್ಸೆ ವೈಫಲ್ಯದಿಂದ ದುರಂತ ಸಾವು ಕಂಡ ದೊರೆಸಾನಿ ಧಾರವಾಹಿ ನಟಿ ಚೇತನಾ ರಾಜ್
ಆಪರೇಷನ್ ಗಾಗಿ ತನ್ನ ಚಿನ್ನವನ್ನು ಅಡವಿಟ್ಟ ಸಂಗತಿ ಬಯಲಾಗಿದೆ.
ಈ ಶಸ್ತ್ರ ಚಿಕಿತ್ಸೆಗಾಗಿ 80 ಸಾವಿರದಷ್ಟು ಹಣ ಅಗತ್ಯವಿತ್ತು. ಆಗ ಮನೆಯವರಿಗೆ ಈ ವಿಷಯ ತಿಳಿಸದೇ ಗೆಳೆಯ ಸಹಾಯದೊಂದಿಗೆ ತನ್ನ ಬಳಿಯ ಚಿನ್ನವನ್ನು 80 ಸಾವಿರ ರು ಅಡವಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.ಜಿಮ್ ಟ್ರೈನರ್ ಸಲಹೆ ಮೇರೆಗೆ ಪ್ಯಾಟ್ ತೆಗೆಸುವ ಶಸ್ತ್ರ ಚಿಕಿತ್ಸೆಗೆ ಚೇತನಾ ಮುಂದಾಗಿದ್ದರು ಎಂದು ಹೇಳಲಾಗಿದೆ.
ಈ ನಡುವೆ ಬೆಂಗಳೂರಿನ ನವರಂಗ ಚಿತ್ರ ಮಂದಿದರ ಬಳಿ ಇರುವ ಶೆಟ್ಟಿ ಆಸ್ಪತ್ರೆಗೆ ನಿನ್ನೆಯಿಂದಲೇ ಬೀಗ ಜಡಿಯಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಪೋಲಿಸರು ನೋಟಿಸ್ ನೀಡಿದ್ದರೂ ಆ ಆಸ್ಪತ್ರೆ
ವೈದ್ಯರು ಹಾಗೂ ಸಿಬ್ಬಂದಿಗಳು ನಾಪತ್ತೆಯಗಿದ್ದಾರೆ.
ಇದನ್ನು ಓದಿ : 1988ರ ರಸ್ತೆ ಗಲಭೆ ಪ್ರಕರಣ: ನವಜೋತ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ಸುಪ್ರೀಂ
ಶಸ್ತ್ರ ಚಿಕಿತ್ಸೆಯ ವೈಫಲ್ಯತೆ , ವೈದ್ಯರ ನಿರ್ಲಕ್ಷ್ಯ ಹಾಗೂ ಆಸ್ಪತ್ರೆಯಲ್ಲಿ ಐಸಿಯು ವಾರ್ಡ್ ಇಲ್ಲದೆ ಆಪರೇಷನ್ ಮಾಡಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದರೂ ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ ಸಮರ್ಪಕ ಉತ್ತರ ಹಾಗೂ ಸೌಲಭ್ಯಗಳ ಕೊರತೆ ಇದ್ದರೆ ಶೆಟ್ಟಿ ಅಸ್ಪತ್ರೆಗೆ ಶಾಶ್ವತ ಬೀಗ ಬೀಳುವುದು ಗ್ಯಾರೆಂಟಿ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ
- ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ