Editorial

ವಿಭಿನ್ನ ಆಚರಣೆಯ ಸಿರಿಯಾಳ ಷಷ್ಠಿ

ಶ್ರಾವಣದ ನಾಗರ ಪಂಚಮಿಯ ಬೆನ್ನಲ್ಲೇ ಮತ್ತೊಂದು ಹಬ್ಬವನ್ನು ಆಚರಿಸಲಾಗುತ್ತದೆ. ಮಲೆನಾಡು ಪ್ರಾಂತ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿರುವ ಈ ಸಿರಿಯಾಳ ಷಷ್ಠಿ ಹಬ್ಬ ಇಂದಿಗೂ ಕೆಲವೆಡೆ ಆಚರಣೆಯಲ್ಲಿದೆ.


ಈಶ್ವರನೇ ಸಿರಿಯಾಳನನ್ನು ವಿಧ ವಿಧವಾಗಿ ಪರೀಕ್ಷಿಸಿ ಅವನ ಮಗನನ್ನೇ ಆಹಾರವಾಗಿ ಕೇಳಿದಾಗ ತನ್ನ ಮಗನನ್ನೇ ಬಳಸಿ ಅಡುಗೆ ತಯಾರಿಸಿ, ಬಡಿಸಿ ವರಗಳನ್ನು ಪಡೆದ ಪರಮೇಶ್ವರನ ಪರಮಭಕ್ತನಾದ ಭಕ್ತ ಸಿರಿಯಾಳನ ಕತೆ ಎಲ್ಲರಿಗೂ ಗೊತ್ತೇ ಇದೆ. ಇದು ಚಲನಚಿತ್ರ ರೂಪದಲ್ಲೂ ಲಭ್ಯವಿದೆ.


ಇದರ ಐತಿಹ್ಯವಾಗಿ ಸಿರಿಯಾಳ ಷಷ್ಠಿ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಸಿರಿಯಾಳ ಷಷ್ಠಿ ಬಾಗಿನ ಕೊಡುವ ಹಬ್ಬ ಎಂದು ಕರೆಯಲಾಗುತ್ತದೆ.


ನಾಗರ ಪಂಚಮಿ ಹಾಗೂ ಸಿರಿಯಾಳ ಷಷ್ಠಿ ಒಂದು ರೀತಿಯಲ್ಲಿ ಅವಳಿ ಹಬ್ಬಗಳೆಂದು ಹೇಳಬಹುದು. ಶ್ರಾವಣ ಮಾಸದ ಪಂಚಮಿಯಂದು ನಾಗರ ಪಂಚಮಿ ಆಚರಿಸಿದರೆ ಮಾರನೇ ದಿನವಾದ ಷಷ್ಠಿಯಂದು ಸಿರಿಯಾಳ ಷಷ್ಠಿಯನ್ನು ಆಚರಿಸಲಾಗುತ್ತದೆ. ಇದನ್ನು ವಿಶೇಷವಾಗಿ ಗಂಡು ಮಕ್ಕಳ ತಾಯಂದಿರು ಮಾಡುವುದು. ಈ ಹಬ್ಬವೂ ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ಇಂದಿಗೂ ಚಾಲ್ತಿಯಲ್ಲಿದೆ.


ಸಿರಿಯಾಳ ಷಷ್ಠಿ ದಿನದಂದು ಸುಮಂಗಲಿಯರು ಅಭ್ಯಂಜನ ಮಾಡಿ, ಪೂಜೆ ಮಾಡಿ, ಅಡುಗೆಗಳನ್ನು ತಯಾರಿಸಿ ಅದನ್ನೇ ಬಾಗಿನ ರೂಪದಲ್ಲಿ ನೀಡುವ ಪದ್ಧತಿ ಇದೆ. ಭಕ್ತ ಸಿರಿಯಾಳ ಯಾವ ರೀತಿ ಮಗನನ್ನೇ ಬಳಸಿ ಅಡುಗೆ ತಯಾರಿಸಿ ಅತಿಥಿಗೆ ಬಡಿಸಿದ ರೀತಿಯಲ್ಲೇ ಇದನ್ನು ಪಾಲಿಸಲಾಗುತ್ತದೆ. ಮನೆಯಲ್ಲಿ ಮಗನನ್ನೇ ಬಳಸಿ ಅಡುಗೆ ತಯಾರಿಸಿದಂತೆ ನಾಲ್ಕು ಬಗೆಯ ಅನ್ನ, ಭಕ್ಷ್ಯಗಳನ್ನು ತಯಾರಿಸಿ ಬಾಳೆ ಎಲೆಯ ಮೇಲೆ ಬಡಿಸಿ ಅದನ್ನೇ ಬಾಗಿನದ ರೂಪದಲ್ಲಿ ನೀಡಿ. ಪುತ್ರನ ಆಯಸ್ಸು ಆರೋಗ್ಯ ವೃದ್ಧಿಯಾಗಲಿ ಎಂದು ಆಚರಿಸುವ ಹಿನ್ನೆಲೆ ಇದೆ.



ಈ ಹಬ್ಬದ ವಿಶೇಷವೇನೆಂದರೆ ಸಿರಿಯಾಳ ಷಷ್ಠಿ ಬಾಗಿನವನ್ನು ಗಂಡು ಮಕ್ಕಳ ತಾಯಂದಿರೇ ಒಬ್ಬರಿಗೊಬ್ಬರು ಬಾಗಿನ ಕೊಟ್ಟು ತೆಗೆದುಕೊಳ್ಳುವ ಪರಿಪಾಠವಿದೆ. ಈ ಹಬ್ಬವನ್ನು ಗಂಡು ಮಕ್ಕಳ ತಾಯಂದಿರು ಮಾತ್ರ ಆಚರಿಸುವುದು.ಮಾಡಿದ ಅಡುಗೆಗಳನ್ನ ಬಾಗಿನ ನೀಡುವುದೇ ದೇವರಿಗೆ ನೈವೇದ್ಯ ಮಾಡಿದಂತೆ ಎಂಬ ನಂಬಿಕೆಯಿದೆ.


ಈ ಬಾಗಿನ ಕೊಡುವ ಸಂದರ್ಭದಲ್ಲಿ ಗಂಡು ಮಕ್ಕಳು ಮನೆಯಲ್ಲಿ ಇರಬಾರದೆಂಬ ಪ್ರತೀತಿ. ಇದನ್ನು ಕೊಡುವುದು, ತೆಗೆದುಕೊಳ್ಳುವುದನ್ನು ಗಂಡು ಮಕ್ಕಳು ನೋಡಬಾರದೆಂಬ ಪ್ರತೀತಿ.ಒಂದು ವೇಳೆ ಇದ್ದರೂ ಮನೆಯ ಸೂರಿನಿಂದ ಆಚೆ ಕಳಿಸಿ ಬಾಗಿನ ನೀಡಲಾಗುತ್ತದೆ. ಬಾಗಿನ ಸ್ವೀಕರಿಸಿದ ಮಹಿಳೆಯರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಊಟ ಮಾಡಬೇಕೆಂಬ ಪದ್ಧತಿ.

ಶ್ರಾವಣ ಮಾಸವನ್ನು ಹಬ್ಬಗಳ ಸಾಲು ಎಂದೇ ಕರೆಯಲಾಗುತ್ತದೆ. ಭೀಮನ ಅಮಾವಾಸ್ಯೆ, ಮಂಗಳ ಗೌರಿ, ನಾಗರ ಪಂಚಮಿ, ಸಿರಿಯಾಳ ಷಷ್ಠಿ ಒಂದರ ಹಿಂದೆ ಮತ್ತೊಂದು. ಕೆಲವೊಮ್ಮೆ ವಾರವಿಡೀ ಹಬ್ಬಗಳು, ಪಾಯಸದ ಊಟದ ಸಂಭ್ರಮಗಳು.

ಕಾವೇರಿ ಭಾರದ್ವಾಜ್

Team Newsnap
Leave a Comment

Recent Posts

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024

ಕರುಳಿನ ಆರೋಗ್ಯ ಚೇತರಿಕೆಗೆ ಕರಿ ಎಳ್ಳು ರಾಮಬಾಣ !

ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More

September 20, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More

September 20, 2024

ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ಬಂಧನ

ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More

September 20, 2024

ಅಕ್ಟೋಬರ್ 4 ರಿಂದ 7 ವರೆಗೆ ಶ್ರೀರಂಗಪಟ್ಟಣ ದಸರ

ಶ್ರೀರಂಗಪಟ್ಟಣ : ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ… Read More

September 19, 2024