ಹಿರಿಯ ಸಾಹಿತಿ ಮುಮ್ತಾಜ್ ಬೇಗಂ (73) ಉಡುಪಿಯಲ್ಲಿ ಇಂದು ನಿಧನರಾದರು.
ಕಳೆದ ನಾಲ್ಕು ದಶಕಗಳ ಕಾಲ ಸಾಹಿತ್ಯ ಕೃಷಿ ಮಾಡಿರುವ ಮುಮ್ತಾಜ್ ಬೇಗಂ ಕೊರೋನಾ ಸೋಂಕಿ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ವೈದ್ಯಯಾಗಿರುವ ತಮ್ಮ ಪುತ್ರಿಯ ಜೊತೆ ಗುಜರಾತ್ ನಲ್ಲಿ ವಾಸವಾಗಿದ್ದ ಬೇಗಂ, ತಮ್ಮ ಇತ್ತೀಚಿನ ಕೃತಿ ಸೂರ್ಯಾಸ್ತ ಬಿಡುಗಡೆ ಮಾಡಲು ಉಡುಪಿಗೆ ಆಗಮಿಸಿದ ವೇಳೆ ಕೊರೋನಾ ಸೋಂಕು ತಗುಲಿತ್ತು.
ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಬೇಗಂ ಅವರಿಗೆ ಸಂದಿವೆ.