July 30, 2025

Newsnap Kannada

The World at your finger tips!

y.Ravi1

ಹಿರಿಯ ಪತ್ರಕರ್ತ ವೈ. ರವಿ ಅನಾರೋಗ್ಯ ದಿಂದ ನಿಧನ

Spread the love

ಮೃದು ಮಾತಿನ ಅಜಾತಶತ್ರು, ಸ್ನೇಹ ಜೀವಿ, ಹಿರಿಯ ಪತ್ರಕರ್ತ, ಕಲಬುರಗಿ ಪ್ರಜಾವಾಣಿ ಬ್ಯುರೊದಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ವೈ.ರವಿ (58) ಮೆದುಳಿನ ರಕ್ತ ಹೆಪ್ಪುಗಟ್ಟಿ ಚಿಕಿತ್ಸೆ ‌ಫಲಿಸದೇ ಮಂಗಳೂರಿನಲ್ಲಿ ‌ನಿಧನರಾದರು.

ಅವಿವಾಹಿತರಾಗಿದ್ದ ಅವರಿಗೆ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ.

ವಾರದ ಹಿಂದೆ ಕಲಬುರ್ಗಿಯ ತಮ್ಮ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರನ್ನು ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಪಾಸಣೆಯಿಂದ ತಿಳಿದು ಬಂದಿತ್ತು.
ಕುಟುಂಬದ ಸದಸ್ಯರು ‌ಮಂಗಳೂರಿಗೆ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿದ್ದರು. ದಿನೇ ದಿನೇ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು.

ವೈ ರವಿ ಮಂಡ್ಯ, ಗದಗ ಜಿಲ್ಲಾ ವರದಿಗಾರರಾಗಿ, ಮಂಗಳೂರು ಪ್ರಜಾವಾಣಿ ಬ್ಯುರೊ ಮುಖ್ಯಸ್ಥರಾಗಿ, ನಂತರ ಬೆಂಗಳೂರು, ಜಮ್ಮು ಕಾಶ್ಮೀರದ ಶ್ರೀನಗರ ಹಾಗೂ ಕಲಬುರ್ಗಿಯಲ್ಲಿ ಕರ್ತವ್ಯ ‌ನಿರ್ವಹಿಸಿದ್ದರು.

error: Content is protected !!