ನದಿ ಬಳಿಯಲ್ಲಿರುವ ಕಲ್ಲು ಬಂಡೆಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ, ನಿಯಂತ್ರಣ ತಪ್ಪಿದ ಯುವತಿ ನೀರು ಪಾಲಾದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ನಡೆದಿದ್ದು ಒಡಿಶಾದ ಸುಂದರ್ ಗಡ್ ಜಿಲ್ಲೆಯ ಕುನಕುಂದಾ ನದಿಯ ಬಳಿ. ನಿರುಪಮಾ ಪ್ರಜಾಪತಿ (23) ಎಂಬ ಯುವತಿ ನೀರು ಪಾಲಾಗಿದ್ದಾಳೆ.
ನಿರುಪಮಾ ಜೋರಾಗಿ ಹರಿಯುತ್ತಿರುವ ನದಿ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವ ವೇಳೆಯಲ್ಲಿ ಪಕ್ಕದಲ್ಲಿ ಬಂದ ವ್ಯಕ್ತಿಯು ನಿಯಂತ್ರಣ ತಪ್ಪಿ, ನಿರುಪಮಾಳ ಮೇಲೆ ಬೀಳುತ್ತಾನೆ. ಭಾರಿ ರಭಸವಾಗಿ ಹರಿಯುತ್ತಿದ್ದ ನದಿಯ ಕಲ್ಲು ಬಂಡೆ ತುದಿಯಲ್ಲಿ ನಿಂತಿದ್ದರಿಂದ ಆಕೆ ನದಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಾಳೆ.
ನಿರುಪಮಾಳ ಗೆಳತಿ ಹೆಲ್ಪ್ ಎಂದು ಎಷ್ಟೇ ಕೂಗಿಕೊಂಡರೂ ಯಾರೂ ನೆರವಿಗೆ ಹೋಗದೇ ಇರುವುದರಿಂದ ಆಕೆ ಕೊಚ್ಚಿ ಹೋಗುತ್ತಾಳೆ.
ಕೊನೆಗೆ ಅಗ್ನಿಶಾಮಕ ದಳದವರು ನಿರುಪಮಾಳ ಶವ ಶೋಧನೆ ಮಾಡಿದಾಗ ದೂರದಲ್ಲಿನ ಕಲ್ಲು ಬಂಡೆ ಮಧ್ಯೆ ಶವ ಸಿಗುತ್ತದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು