ಆತ್ಮೀಯ ಗೆಳತಿ ಗಂಡನೊಂದಿಗೆ ಗಾಢವಾದ ಸ್ನೇಹ ಹೊಂದಿದ್ದ ಸಂಗತಿ ವಾಟ್ಸ್ ಆಪ್ ಸ್ಟೇಟಸ್ ನಿಂದ ತಿಳಿದುಕೊಂಡ ಮಹಿಳೆಯೊಬ್ಬಳು ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡ ದಲ್ಲಿ ಜರುಗಿದೆ.
ಈವೆಂಟ್ ಡ್ಯಾನ್ಸರ್ ಗಾಯತ್ರಿ ಎಂಬಾಕೆ ವಿಜಯವಾಡದ ವಂಬೆ ಕಾಲನಿಯಲ್ಲಿರುವ ತನ್ನ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಘಟನೆಗೆ ತನ್ನ ಆತ್ಮೀಯ ಮತ್ತೊಬ್ಬ ಡ್ಯಾನ್ಸರ್ ಗೆಳತಿ ಮಾಡಿದ ದ್ರೋಹ ಕಾರಣ ಎನ್ನಲಾಗಿದೆ.
ವಂಬೆ ಕಾಲನಿಯ ಬನ್ನಿ ಡ್ಯಾನ್ಸ್ ಟ್ರೂಪ್ನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಗಾಯತ್ರಿ ,, ಸಂತೋಷ್ ಎಂಬಾತನನ್ನು ಪ್ರೀತಿಸಿ ಕೆಲವು ವೇಳೆ ವರ್ಷಗಳ ಹಿಂದೆ ಮದುವೆಯಾಗಿದ್ದಳು. ಇಬ್ಬರ ವೈವಾಹಿಕ ಜೀವನ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದರು.
ಬನ್ನಿ ಪತ್ನಿ ನೀಲಿಮಾ ಸಹ ಡ್ಯಾನ್ಸರ್ ಆಗಿದ್ದಳು. ಗಾಯತ್ರಿ ಮತ್ತು ನೀಲಿಮಾ ಇಬ್ಬರು ಸಹ ಒಳ್ಳೆಯ ಸ್ನೇಹಿತೆಯರಾಗಿದ್ದರು. ಬರು ಬರುತ್ತಾ ಬನ್ನಿ ಮತ್ತು ಗಾಯತ್ರಿ ನಡುವೆ ವಿವಾಹೇತರ ಸಂಬಂಧ ಬೆಳೆಯ ತೊಡಗಿತು.
ಇತ್ತೀಚೆಗಷ್ಟೇ ಗಾಯತ್ರಿ, ಬನ್ನಿ ಜತೆಗಿರುವ ಫೋಟೋವನ್ನು ತನ್ನ ವಾಟ್ಸ್ಆಯಪ್ ಸ್ಟೇಟಸ್ನಲ್ಲಿ ಶೇರ್ ಮಾಡಿಕೊಂಡಿದ್ದಳು.
ಅದನ್ನು ನೋಡಿ ಬನ್ನಿ ಪತ್ನಿ ನೀಲಿಮಾ, ಗಾಯತ್ರಿ ಮನೆಗೆ ಧಾವಿಸಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆಯೂ ಜಗಳವೂ ನಡೆದು ನೀಲಿಮಾ ಮನೆಯಿಂದ ಹೊರನಡೆದ ಬೆನ್ನಲ್ಲೇ ಗಾಯತ್ರಿ ನೇಣಿಗೆ ಶರಣಾದಳು.
ನೀಲಿಮಾ ಮನೆಗೆ ಬಂದಾಗ ಗಾಯತ್ರಿ ಗಂಡ ಸತೀಶ್ ತನ್ನೆರೆಡು ಮಕ್ಕಳನ್ನು ಕರೆದುಕೊಂಡು ಹೊರ ಹೋಗಿದ್ದ. ಸತೀಶ್ ಮನೆಗೆ ಮರಳಿದಾಗ ಬಾಗಿಲು ಹಾಕಿರುವುದನ್ನು ನೋಡಿ ತವರಿಗೆ ಹೋಗಿರಬಹದು ಅಂದುಕೊಂಡಿದ್ದಾನೆ. ಆದರೆ, ಕಿಟಕಿಯನಲ್ಲಿ ಇಣುಕಿ ನೋಡಿದಾಗ ಗಾಯತ್ರಿ ನೇಣು ಹಾಕಿಕೊಂಡಿರುವ ಬೆಳಕಿಗೆ ಬಂದಿದೆ. ಬಳಿಕ ಬಾಗಿಲ ಒಡೆದು ಒಳಗೆ ನುಗ್ಗಿದ್ದಾರೆ.
ಗಾಯತ್ರಿ ಮನೆಗೆ ಬಂದಿದ್ದ ನೀಲಿಮಾ ಆಕೆಯನ್ನು ಹಿಗ್ಗಾಮುಗ್ಗ ಬೈದು, ಹೀಯಾಳಿಸಿದ್ದಾಳೆ. ಅದೇ ನೋವಿನಲ್ಲಿ ಗಾಯತ್ರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪ್ರಕರಣ ದಾಖಲಾಗಿದ್ದು, ಗಾಯತ್ರಿ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment