February 22, 2026

Newsnap Kannada

The World at your finger tips!

school , learning , teaching

ಶಾಲಾ ಶುಲ್ಕ ಪಾವತಿ – ಪರೀಕ್ಷೆಯಿಂದ ಅರ್ಧಕ್ಕೆ ಕಳುಹಿಸಿ ಅಪಮಾನ: ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ?

Spread the love

ಪೂರ್ಣ ಪ್ರಮಾಣದ ಶಾಲಾ ಶುಲ್ಕ ಪಾವತಿ ಮಾಡುವಂತೆ ಒತ್ತಾಯಿಸಿ ಅಪಮಾನ ಮಾಡಿದ್ದರಿಂದ ವಿದ್ಯಾರ್ಥಿ ಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಬುಧವಾರ ಜರುಗಿದೆ.

10 ತರಗತಿ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯುವಾಗಲೇ ಅರ್ಧಕ್ಕೆ ಎಬ್ಬಿಸಿ ಕಳುಹಿಸಿದ್ದರಿಂದ ಮನನೊಂದ ಈ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಲ

ಬೊಮ್ಮನಹಳ್ಳಿನ ಸೋಮಸುಂದರ ಹಳ್ಳಿಯ ರವೀಂದ್ರ ಭಾರತಿ ಗ್ಲೋಬಲ್ ಸ್ಕೂಲ್ ಯಲ್ಲಿ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯ ಪೋಷಕರು ಖಾಸಗಿ ಶಾಲೆಗೆ ಇನ್ನೂ 50 ಸಾವಿರ ಬಾಕಿ ಫೀಸ್ ಹಣ ಪಾವತಿ ಮಾಡಬೇಕಾಗಿತ್ತು.

‌ಆದರೆ ಇನ್ನೂ ಹಣ ಪಾವತಿ ಮಾಡಿರಲಿಲ್ಕ. ಈ ದಿನ ನಡೆದ ಪರೀಕ್ಷೆ ವೇಳೆ ವಿದ್ಯಾರ್ಥಿಯನ್ನು ಅರ್ಧಕ್ಕೆ ನಿಲ್ಲಿಸಿ ಮನೆಗೆ ಕಳುಹಿಸಿದ್ದರಿಂದ ಮನನೊಂದ ಆತ್ಮಹತ್ಯೆಗೆ ಯತ್ನಿಸಿ ದ್ದಾನೆ. ಪೋಷಕರು ಆತನನ್ನು ಬಚಾವ್ ಮಾಡಿದ್ದಾರೆ.

error: Content is protected !!