January 28, 2026

Newsnap Kannada

The World at your finger tips!

sankaranti makara

ಸಂಕ್ರಾಂತಿ….

Spread the love

ಸೂರ್ಯನ ಕಾಂತಿಯ ಹೊತ್ತು ಬಂದಿತೊ ಸಂಕ್ರಾಂತಿ
ಎಲ್ಲರ ಮನದಲಿ ಮೂಡಿತು ಸಂಭ್ರಮದ ಕ್ರಾಂತಿ

ಉತ್ತರಾಯಣ ನಮಗೆ ಪುಣ್ಯದಾ ಕಾಲಾ
ಚಿಣ್ಣರು ಹಾರಿಸುತಿರೆ ಪಟಗಳಾ ಸಾಲಾ
ಎತ್ತುಗಳ ಸಿಂಗಾರ ನೋಡುವುದೇ ಚಂದಾ
ಬೆಚ್ಚನೆಯ ಕಿಚ್ಚು ಹಾಯಿಸಿದ ಅಂದಾ

ಧಾನ್ಯಗಳ ರಾಶಿಗೆ ಪೂಜೆಯನು ಮಾಡೋಣ
ವರುಷದಾ ಮೊದಲ ಹರುಷವನು ಕಾಣೋಣ
ಮಕರದೆಡೆಗೆ ನೇಸರನು ಹೊಸ ಹೆಜ್ಜೆಯನಿರಿಸೀ
ಸುಂದರ ನಾಳೆಯ ತಂದ ಸಂತಸದಿ ಹರಸಿ

ಹೊಲಗದ್ದೆಗಳು ಹಾಸಿವೆ ಹಸಿರಿನಾ ಸೆರಗಾ
ಸುಮಗಳು ರಂಗಾಗಿ ನೀಡಿವೆ ಹೊಸ ಮೆರುಗಾ
ಎಳ್ಳುಬಾಳೆ ಕಬ್ಬು ಊರಿಗೆಲ್ಲಾ ಹಂಚಿ
ಒಳ್ಳೆಯ ಮಾತಾಡಿ ವಿರಸವಾ ಕಳಚಿ

roopa manjunath

ರೂಪ ಮಂಜುನಾಥ
ಹೊಳೆನರಸೀಪುರ

error: Content is protected !!