ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಪತ್ನಿ ಶ್ರಾವಣಿ ನಡುವೆ ದಾಂಪತ್ಯ ಕಲಹ ಉಂಟಾಗಿದ್ದು,ಈ ಜೋಡಿ ಹೊಡೆದಾಡಿಕೊಂಡು ಪೊಲೀಸ್ ಠಾಣೆಗೆ ಹೋದ ಘಟನೆ ನಡೆದಿದೆ.
ಏನಾಗಿದೆ?
ಮಾಹಿತಿ ಪ್ರಕಾರ, ಶ್ರಾವಣಿ ಅವರ ಮೇಲೆ ಸಮೀರ್ ಅವರ ಮಗಳ ಬಗ್ಗೆ ಮಾಡಿದ ಹೇಳಿಕೆಗಳಿಂದ ಜಗಳ ಶುರುವಾಗಿದ್ದು, ಹೊಡೆದಾಡಿಕೆ ಪರಾಕಾಷ್ಠೆಗೆ ತಲುಪಿತು. ಅಂತೆಯೇ, ಸಮೀರ್ ಅವರ ಅತ್ತೆ ಮತ್ತು ಮಾವ ಸಹ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ, ಶ್ರಾವಣಿ ಇನ್ಸ್ಟಾಗ್ರಾಮ್ನಲ್ಲಿ ಲೈವ್ ಮಾಡಲು ಹೋಗಿದ್ದು, ಆ ಸಂದರ್ಭದಲ್ಲಿ ಸಮೀರ್ ಅವರ ಹಲ್ಲೆಗೆ ಒಳಗಾದರು.
ಈ ಗಲಾಟೆಯಲ್ಲಿ ಸಮೀರ್ ಅವರ ತಂದೆಗೆ ಕೂಡ ಗಾಯಗಳು ಸಂಭವಿಸಿದವು. ನಂತರ, ಶ್ರಾವಣಿ ನ್ಯಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದಾಗ, ಸಮೀರ್ ಅವರ ಫೋಷಕರು ಕೂಡ ಪ್ರತಿಯಾಗಿ ಸೊಸೆ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.
ಪೊಲೀಸರಿಂದ ಪರಿಹಾರ:
ಮಹಿಳಾ ಪೊಲೀಸ್ ಅಧಿಕಾರಿಗಳು ದಂಪತಿಯನ್ನು ಕೌನ್ಸೆಲಿಂಗ್ ಮೂಲಕ ಸಮಾಧಾನಗೊಳಿಸಿದ್ದಾರೆ. ಕೊಟ್ಟ ದೂರುವನ್ನು ವಾಪಸ್ ಪಡೆಯಲು ಹಾಗೂ ಮುಂದಿನ ಕಾಲದಲ್ಲಿ ಅಹಿತಕರ ಘಟನೆಗಳು ಪುನಾರಾವೃತ್ತವಾಗದಂತೆ ಒಪ್ಪಂದವೊಂದನ್ನು ಬರೆಯುವಂತೆ ಸಮರ್ಥಿಸಿದ್ದಾರೆ.ಗಂಡು ಮಗುವನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆ
ಈ ಘಟನೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರಿಂದ ವ್ಯತ್ಯಾಸದ ಪ್ರತಿಕ್ರಿಯೆಗಳನ್ನು ಕೂಡ ಪಡೆದುಕೊಳ್ಳುತ್ತಿದೆ.