ತ್ರಿಮೂರ್ತಿ ರೂಪನೆ ಗುರುವೆ,ಹೇ ವರಕಲ್ಪ ತರುವೆ!
ನಿನ ಪಾದ ಸೇವೆಯಲಿ,ಧನ್ಯಳು ನಾನಾಗುವೆ!
ವೈರಾಗ್ಯ ಸಾಮ್ಮಾಜ್ಯವ ಆಳುವಾ ಪ್ರಭುವೇ!
ಸಚ್ಚಿದಾನಂದ ಗುರುವೆ,
ನಿನ ಪಾದಕೆರಗುವೆ!
ಬ್ರಹ್ಮ ಗೀಚಿದಾ ಬರಹದ, ತಾಪಕೆ ತಂಪೆರೆಯುವೆ!
ಪಾಪ ಕರ್ಮದಾ ಫಲಕೆ, ಪರಿಹಾರ ಹುಡುಕುವೆ!
ಆಪತ್ತನು ಕಂಡೊಡನೆ,ಉಪಾಯವ ತೋರುವೆ!
ಗುರು ಸಾಕ್ಷಾತ್ ಪರಂಬ್ರಹ್ಮ! ನಿನ ಪಾದಕೆರಗುವೆ!
ಭವ ಭಾದೆಯ ನಾವೆಯ, ಸುಲಭದೆ ದಾಟಿಸುವೆ!
ಮೋಹ ಮಮಕಾರಗಳ,ಬಂಧವ ಸಡಿಲಿಸುವೆ!
ವಿರಾಗದ ಹಾದಿಯ ಸುಗಮವ ನೀ ಮಾಡುವೆ!
ಗುರು ಸಾಕ್ಷಾತ್ ಮಹಾವಿಷ್ಣುವೆ, ನಿನ ಪಾದಕೆರಗುವೆ!
ಒಡಲಿನ ಅರಿಗಳ ಬೆಂಕಿಗೆ, ಜಲ ನೀನಾಗಿರುವೆ!
ಉಡುಗಿಸಿ ಬೆಡಗಿನ ಬಾಳ್ವೆಯ, ಸರಳ ದಾರಿ ತೋರುವೆ!
ಹೀನ ಗುಣಗಳನ್ನೆಲ್ಲ ತರಿದು, ದೀನಳನ್ನ ಮಾಡುವೆ!
ಗುರು ಸಾಕ್ಷಾತ್ ಪರಮೇಶ್ವರ, ನಿನ ಪಾದಕೆರಗುವೆ!
ರೂಪ ಮಂಜುನಾಥ
ಹೊಳೆನರಸೀಪುರ
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment