ವಿಶ್ವ ವಿಖ್ಯಾತ ನಾಡಹಬ್ಬ ದಸರಾಗೆ ಯಾವುದೇ ವಿಘ್ನವಾಗದಂತೆ ಸಂಪನ್ನಗೊಳ್ಳಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾಯಿ ಚಾಮುಂಡೇಶ್ವರಿ ಮಾತೆಯಲ್ಲಿ ಹರಕೆ ಹೊತ್ತಿದ್ದರು.
ದಸರಾ ಹಬ್ಬ ಸಾಂಗವಾಗಿ ಜರುಗಿದ ನಂತರ ಚಾಮುಂಡಿ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ತಾಯಿ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ಈಡೇರಿಸಿದ್ದಾರೆ
ಸೋಮವಾರ ಜಂಬೂ ಸವಾರಿ ಯಶಸ್ವಿಯಾಗಿ ಮುಗಿಯುತ್ತಿದ್ದಂತೆ ಸಂಜೆ ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ಭೇಟಿನೀಡಿದ ರೋಹಿಣಿಯವರು ತಮ್ಮ ಹರಕೆ ಪೂರೈಸಿದರು.

ದಸರಾದ ಸಮಯದಲ್ಲೇ ಮೈಸೂರಿನ ಜಿಲ್ಲಾಧಿಕಾರಿಯಾಗಿ ವರ್ಗವಾಗಿದ್ದ ರೋಹಿಣಿಯವರು, ನವರಾತ್ರಿಯ 9 ದಿನಗಳೂ ರೋಹಿಣಿಯವರು ದಸರಾ ಹಬ್ಬ ಸುಸೂತ್ರವಾಗಿ ನೆರವೇರಲೆಂದು ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ್ದರು. ಸೋಮವಾರ ಸಂಜೆ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಹರಕೆ ಪೂರ್ಣಗೊಳಿಸಿದರು.


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ