Categories: Main News

ನಟ ಗಣೇಶ್​ ಥರ ಇದ್ರಿ : ಈಗ ವಜ್ರಮುನಿ ಥರಾ ಆಡ್ತಿರಾ- ರವೀಂದ್ರನಿಗೆ ರಾಕ್​ಲೈನ್​ ಟಾಂಗ್

ಮಂಗಾರು ಮಳೆ ಗಣೇಶ್​ ಥರ ಇದ್ದವರು ಈಗ ವಜ್ರಮುನಿ ಥರಾ ಆಡ್ತಿರಾ ಎಂದು ಶಾಸಕ
ರವೀಂದ್ರ ಶ್ರೀಕಂಠಯ್ಯ ಅವರಿಗೆ ನಿರ್ಮಾಪಕ ರಾಕ್​ಲೈನ್​ ಟಾಂಗ್ ನೀಡಿದರು.

ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ರೆಬಲ್ ಸ್ಟಾರ್ ಅಂಬರೀಶ್’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ರಾಕ್​​ಲೈನ್​​ ವೆಂಕಟೇಶ್ ಕಿಡಿಕಾರಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ರಾಕ್​ಲೈನ್​, ರವೀಂದ್ರ ಶ್ರೀಕಂಠಯ್ಯನವರೇ ನಾನು ನಿಮಗೆ ಒಂದು ಮಾತನ್ನ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ತುಂಬಾ ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಆವಾಗ ನಾನು ನಿಮ್ಮನ್ನ ಒಬ್ಬ ಫಿಲಂ ಆ್ಯಕ್ಟರ್​ ಥರಾ ನೋಡಿಕೊಂಡು ಬಂದೆ. ಅಲ್ಲದೇ ಒಂದು ಸಿನಿಮಾಗೆ ಬನ್ನಿ ಎಂದು ಕೂಡ ಹೇಳಿದ್ದೆ. ಆವಾಗ ನೀವು ಮುಂಗಾರು ಮಳೆ ಗಣೇಶ್​ ಥರಾ ಇದ್ದೀರಿ. ನೀವು ಬೆಳೀತಾ ಬೆಳೀತಾ, ಅದ್ಯಾರ್​ ಮಾತುಗಳನ್ನು ಕೇಳಿಕೊಂಡು, ವಜ್ರಮುನಿ ತಮ್ಮ ಪಾತ್ರದಲ್ಲಿ ಯಾವ ರೀತಿ ಮಾಡ್ತಿದ್ದರೋ ಹಾಗೇ ಮಾಡಲು ಶುರುಮಾಡಿದ್ದೀರ.. ವಜ್ರಮುನಿಯ ಹಾಗೆ ಖಳನಾಯಕನ ಥರಾ ಕೂಗಾಡಿಕೊಂಡು, ಹಾರಾಡಿಕೊಂಡು, ಚೀರಾಡಿಕೊಂಡು ಮಾಡುತ್ತಿದ್ದೀರಾ. ಇದು ಒಳ್ಳೆಯದಲ್ಲ.. ಎಂದು ಕಿವಿ ಮಾತು ಹೇಳಿದರು.

Team Newsnap
Leave a Comment
Share
Published by
Team Newsnap

Recent Posts

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿ : ಸಿ.ಎಂ.ಸಿದ್ದರಾಮಯ್ಯ

ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More

September 21, 2024

10 ವರ್ಷದ ಬಾಲಕ ಹೃದಯಘಾತದಿಂದ ಸಾವು

ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್‌… Read More

September 21, 2024

ಮೈಸೂರು ದಸರಾ ಆನೆಗಳ ನಡುವೆ ಗುದ್ದಾಟ ಆತಂಕದಲ್ಲಿ ದಿಕ್ಕಾಪಾಲಾದ ಜನರು

ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More

September 21, 2024

ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಬೆಳೆಯನ್ನು ಬೃಹತ್ ಉದ್ಯಮವಾಗಿ ಬೆಳೆಯಾಗುತ್ತಿದೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More

September 20, 2024

BMTC ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಾಣಾಪಾಯದಿಂದ ಪಾರು

ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More

September 20, 2024

ಲೋಕಾ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More

September 20, 2024