ಯಶ್ ಮತ್ತು ಅಂಬರೀಶ್ ಡ್ರಾಮಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಯಶ್ ಅಂಬರೀಶ್ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿರುವುದರಿಂದ, ಅವರು ಸುಮಲತಾ ಆಯೋಜಿಸುವ ವಿವಿಧ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ಇದೀಗ, ಅಂಬರೀಶ್ ಅವರ ಬಹುಕಾಲದ ಆಸೆಯನ್ನು ಯಶ್ ಅವರು ಈಡೇರಿಸಿದ್ದಾರೆ, ಇದರಿಂದಾಗಿ ಅಂಬರೀಶ್ ಮೇಲೆ ಅವರಿಗಿರುವ ಗೌರವ ಸ್ಪಷ್ಟವಾಗಿದೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಯಶ್ ಮಗಳಿಗೆ ಜನ್ಮವಾದಾಗ, ಮನೆಯಲ್ಲೇ ಸಂಭ್ರಮ ಮನೆ ಮಾಡಿತ್ತು. ಆಗ ಅಂಬರೀಶ್ ಕಲಘಟಗಿಯಲ್ಲಿ ತಯಾರಿಸಿದ ವಿಶಿಷ್ಟ ತೊಟ್ಟಿಲು ಮಾಡುವಂತೆ ಸೂಚಿಸಿದ್ದರು. ಯಶ್ ಅದನ್ನು ಅಂಬರೀಶ್ ನೆನಪಿಗಾಗಿ ಸಂಗ್ರಹಿಸಿಕೊಂಡಿದ್ದರು.
ಇತ್ತೀಚೆಗೆ ಅಭಿಷೇಕ್ ಅಂಬರೀಶ್ಗೆ ಗಂಡುಮಗು ಜನಿಸಿದ ಹಿನ್ನೆಲೆಯಲ್ಲಿ, ಯಶ್ ಅವರು ಕಲಘಟಗಿಯಲ್ಲಿ ವಿಶೇಷ ತೊಟ್ಟಿಲು ತಯಾರಿಸಿ ಕಳುಹಿಸಿದ್ದಾರೆ. ಶೀಘ್ರದಲ್ಲೇ ತೊಟ್ಟಿಲು ಶಾಸ್ತ್ರ ನಡೆಯಲಿದ್ದು, ಅಂಬರೀಶ್ ಅವರ ಆಶಯದಂತೆ, ಮಗುವನ್ನು ಕಲಘಟಗಿ ತೊಟ್ಟಿಲಿನಲ್ಲಿ ಮಲಗಿಸಿ ತೂಗಿಸುವ ಪರಿಕಲ್ಪನೆಯನ್ನು ಯಶ್ ನೆನೆಸಿಕೊಂಡಿದ್ದಾರೆ.ಇದನ್ನು ಓದಿ –ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ: ಬೈಕ್ ಸವಾರರಿಗೆ ನಿಷೇಧ!
ಈ ವಿಶಿಷ್ಟ ತೊಟ್ಟಿಲು ಯಶ್ ಅವರಿಂದ ಅಭಿಷೇಕ್ ಕುಟುಂಬಕ್ಕೆ ನೀಡಿದ ಅಮೂಲ್ಯ ಉಡುಗೊರೆ. ಇದರಿಂದ ಅಂಬರೀಶ್ ಅಭಿಮಾನಿಗಳಿಗೂ ಖುಷಿ ಆಗಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು