ಧಾರವಾಡ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಟೆಂಪೋ ಟ್ರಾವಲರ್ ಹಾಗೂ ಲಾರಿ ನಡುವೆ ಸಂಭವಿಸಿ ಮುಖಾ ಮುಖಿ ಡಿಕ್ಕಿ ಯಲ್ಲಿ ಮಾಜಿ ಶಾಸಕರ ಸೊಸೆ ಸೇರಿದಂತೆ ಸಾವಿನ ಸಂಖ್ಯೆ 13 ಕ್ಕೆ ಏರಿದೆ.
ಮಾಜಿ ಶಾಸಕ ಗುರು ಸಿದ್ದನಗೌಡರ ಪುತ್ರ ಡಾ ರವಿಕುಮಾರ್ ಪತ್ನಿ ಪ್ರೀತಿ ರವಿಕುಮಾರ್, ಡಾ. ಪ್ರಕಾಶ್ ಮತ್ತಿಹಳ್ಳಿ ಅವರ ಪತ್ನಿ ವೀಣಾ ಪ್ರಕಾಶ್ ಸೇರಿದಂತೆ 13 ಮಂದಿ ದುರಂತ ಸಾವು ಕಂಡಿದ್ದಾರೆ.
ಈ ಬೆಳಿಗ್ಗೆ 8 ಮಂದಿ ಸಾವು ಕಂಡಿದ್ದರು. ಭೀಕರವಾಗಿ ಗಾಯಗೊಂಡವರಲ್ಲಿ ಮತ್ತೆ ಐವರು ಆಸ್ಪತ್ರೆಗೆ ಸಾಗಿಸುವ ಮುನ್ನ ಹಾಗೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಒಟ್ಟು 13 ಮಂದಿ ದುರಂತ ಸಾವು ಕಂಡಂತೆ ಆಗಿದೆ.
ಈ ನಡುವೆ ಸತ್ತರೆಲ್ಲರೂ ದಾವಣಗೆರೆ ಎಂಸಿ ಬ್ಲಾಕ್ – ಎ , ಎಂಸಿಎ -ಬಿ ಹಾಗೂ ವಿದ್ಯಾನಗರ ನಿವಾಸಿಗಳು ಎಂದು ಗುರುತಿಸಲಾಗಿದೆ.
13 ಮಂದಿ ಪೈಕಿ 12 ಮಂದಿ ಬಾಲ್ಯದ ಸ್ನೇಹಿತರು ಆಗಿದ್ದಾರೆ. ಒಬ್ಬ ಮಾತ್ರ ಟೆಂಪೋ ಟ್ರಾವಲರ್ ಚಾಲಕ ಎಂದು ಗುರುತಿಸಲಾಗಿದೆ.
ಸತ್ತವರೆಲ್ಲರೂ ಸೆಂಟ್ ಫಾಲ್ಸ್ ಕಾನ್ವೆಂಟ್ ನ ಹಳೇ ವಿದ್ಯಾರ್ಥಿಗಳು. ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಎಲ್ಕರೂ ಸೇರಿಕೊಂಡಾಗ ಗೋವಾ, ಪಣಜಿ ಟ್ರಿಪ್ ಗೆ ಹೋಗಲು ನಿರ್ಧರಿಸಿ, ಈ ಬೆಳಗಿನ ಜಾವ 3. 30ಕ್ಕೆ ದಾವಣಗೆರೆ ಯಿಂದ ಹೊರಟಿದ್ದರು
ಬೆಳಿಗ್ಗೆ 7.30 ರ ವೇಳೆಗೆ ಧಾರವಾಡ ಸಮೀಪದ ಇಟ್ಟಿಗಟ್ಟ ಮರಳು ತುಂಬಿದ ಲಾರಿ ಟೆಂಪೋ ಟ್ರಾವಲರ್ ಗೆ ಮುಖಾಮುಖಿ ಯಾಗಿ ಡಿಕ್ಕಿ ಹೊಡೆದಿದೆ.
ಟೆಂಪೋದಲ್ಲಿ ಇದ್ದ 16 ಮಂದಿ ಮಹಿಳೆಯರ ಪೈಕಿ 12 ಮಂದಿ ದುರಂತ ಸಾವು ಕಂಡಿದ್ದಾರೆ.
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
ಎಳ್ಳು ನೋಡಲು ಪುಟ್ಟದಾಗಿದ್ದು ಕಟುವಾದ ಯಾವ ವಾಸನೆಯೂ ಇಲ್ಲದ, ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ತನ್ನೊಡನೆ ಹೀರಿಕೊಳ್ಳುವ ವಿಶೇಷಗುಣ… Read More
ನವದೆಹಲಿ ,ಸೆಪ್ಟೆಂಬರ್ 18 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 68,240 ರೂಪಾಯಿ ದಾಖಲಾಗಿದೆ. 24… Read More
ಬೆಂಗಳೂರು: ಇಂದು ಆರ್.ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಇಂದಿನಿಂದ… Read More
This website uses cookies.
Leave a Comment