ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ IPS ಹುದ್ದೆಗೆ ಏರಿದ್ದ ಆರೋಪದ ದೂರಿನ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿ ಕೆಂಪಯ್ಯ ಇಂದು ವಿಚಾರಣೆಗೆ ಹಾಜರಾಗುವಂತೆ ಡಿಸಿಆರ್ ಇ ನೋಟಿಸ್ ನೀಡಿದೆ.
ಇದು ಒಂದು ದಶಕದ ಹಿಂದಿನ ದೂರು. ಈ ಸಂಬಂಧದ ಫೈಲ್ ಕಳೆದು ಹೋಗಿದ್ದರಿಂದ ಪ್ರಕರಣ ತನಿಖೆ ನಿಂತು ಹೋಗಿತ್ತು. ಈಗ ಫೈಲ್ ಸಿಕ್ಕಿದ್ದರಿಂದ ವಿಚಾರಣೆ ಆರಂಭವಾಗಿದೆ.
ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯವು ( ಡಿಸಿಅರ್ ಇ) ಇಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ತಾವು ಕುರುಬ ಸಮಾಜಕ್ಕೆ ಸೇರಿದರೂ ಕಾಡು ಎಂಬ ಜಾತಿ ಪ್ರಮಣ ಪತ್ರ ನೀಡಿ ಪರಿಶಿಷ್ಠ ಪಂಗಡದ ಸೌಲಭ್ಯ ಪಡೆದು IPS ಹುದ್ದೆಗೆ ಏರಿದ್ದೀರಿ ಎಂಬ ಆರೋಪದ ದೂರಿನ ವಿಚಾರಣೆ ನಡೆಸಲು ಕೆಂಪಯ್ಯನಿಗೆ ಬುಲಾವ್ ನೀಡಲಾಗಿದೆ.
ದಶಕದ ಹಿಂದಿನ ದೂರಿಗೆ ಈಗ ಮತ್ತೆ ಜೀವ ಬಂದಿರುವ ಹಿನ್ನೆಲೆಯಲ್ಲಿ ಕೆಂಪಯ್ಯನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
- ರೇವಣ್ಣ ರಿಲೀಸ್ : ಬಿಗ್ ರಿಲೀಪ್
- ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ
- ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್
- CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್
- ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ