Trending

ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ ರವಾನೆ – 17 ಸಚಿವರಿಗೆ ಖಾತೆ ಪುನರ್ ಹಂಚಿಕೆ – ಅಸಮಾಧಾನ

  • ಯಾರಿಗೆ ಯಾವ ಖಾತೆ, ಯಾರ ಖಾತೆಗಳು ಬದಲಾಗಿವೆ ಡಿಟೇಲ್ಸ್ ನೋಡಿ

ರಾತ್ರೋರಾತ್ರಿ ಖಾತೆ ಹಂಚಿಕೆ ಪಟ್ಟಿಯನ್ನು ರಾಜಭವನಕ್ಕೆ ರವಾನಿಸಲಾಗಿದೆ.

ಖಾತೆ ಹಂಚಿಕೆ ಹಾಗೂ ಅದಲು ಬದಲು ಮಾಡಿರುವುದು ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿರುವ ಅಸಮಧಾನ ಮತ್ತು ಭಿನ್ನಮತ ಸ್ಫೋಟವಾಗುವ ಸಾಧ್ಯತೆಗಳು ಇವೆ.

ನೂತನ ಸಚಿವರಿಗೆ ಖಾತೆ ಮಾಡದೇ, ಕೆಲವರ ಖಾತೆಗಳನ್ನು ಸಿಎಂ ಅದಲು-ಬದಲು ಮಾಡಿದ್ದಾರೆ. ಅದೇ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡು ಕಳುಹಿಸಿರುವ ಪಟ್ಟಿಗೆ ಇಂದು ರಾಜ್ಯಪಾಲರು ಅಂಕಿತ ಹಾಕಲಿದ್ದಾರೆ.

ಪ್ರಮುಖವಲ್ಲದ ಖಾತೆ ಸಿಕ್ಕ ಸಚಿವರು ನಿರಾಸೆಯುಂಟಾಗುವುದು ಬಹುತೇಕ ಖಚಿತವಾಗಿದೆ. ಸಂಪುಟದ 17 ಸಚಿವರಿಗೆ ಖಾತೆ ಪುನರ್ ಹಂಚಿಕೆ ಮಾಡಲಾಗಿದೆ.

ಯಾರಿಗೆ ಯಾವ ಖಾತೆ, ಯಾರ ಖಾತೆಗಳು ?

  • ಆಹಾರ ಮತ್ತು ನಾಗರಿಕ ಪೂರೈಕೆ
    ಈಗ – ಉಮೇಶ್ ಕತ್ತಿ,
    ಮೊದಲು – ಗೋಪಾಲಯ್ಯ
  • ಗೃಹ, ಕಾನೂನು, ಸಂಸದೀಯ ವ್ಯವಹಾರ
    ಈಗ – ಬಸವರಾಜ ಬೊಮ್ಮಾಯಿ,
    ಮೊದಲು – ಮಾಧುಸ್ವಾಮಿ
  • ವೈದ್ಯಕೀಯ ಶಿಕ್ಷಣ
    ಈಗ – ಮಾಧುಸ್ವಾಮಿ,
    ಮೊದಲು – ಡಾ. ಕೆ . ಸುಧಾಕರ್
  • ಕನ್ನಡ ಮತ್ತು ಸಂಸ್ಕೃತಿ
    ಈಗ – ಮಾಧುಸ್ವಾಮಿ,
    ಮೊದಲು – ಸಿ ಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು
  • ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ
    ಈಗ – ಸಿಸಿ ಪಾಟೀಲ್,
    ಮೊದಲು – ಸಿ ಎಂ ಯಡಿಯೂರಪ್ಪ ಬಳಿ ಇತ್ತು.
  • ಅರಣ್ಯ ಖಾತೆ
    ಈಗ – ಅರವಿಂದ ಲಿಂಬಾವಳಿ,
    ಮೊದಲು – ಆನಂದ್ ಸಿಂಗ್
  • ಗಣಿ, ಭೂ ವಿಜ್ಞಾನ
    ಈಗ – ಮುರುಗೇಶ ನಿರಾಣಿ
    ಮೊದಲು – ಸಿಸಿ ಪಾಟೀಲ್
  • ಅಬಕಾರಿ
    ಈಗ – ಎಂಟಿಬಿ ನಾಗರಾಜ್.
    ಮೊದಲು – ನಾಗೇಶ್
  • ಸಣ್ಣ ನೀರಾವರಿ
    ಈಗ – ಸಿಪಿ ಯೋಗೇಶ್ವರ್,
    ಮೊದಲು – ಮಾಧುಸ್ವಾಮಿ
  • ಪ್ರವಾಸೋದ್ಯಮ
    ಈಗ – ಆನಂದಸಿಂಗ್,

    ಮೊದಲು – ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು
  • ಪೌರಾಡಳಿತ, ರೇಷ್ಮೆ
    ಈಗ – ಆರ್ ಶಂಕರ್,
    ಮೊದಲು – ಕೆ ಸಿ ನಾರಾಯಣಗೌಡ
  • ತೋಟಗಾರಿಕೆ/ ಸಕ್ಕರೆ
    ಈಗ – ಗೋಪಾಲಯ್ಯ,
    ಮೊದಲು – ನಾರಾಯಣಗೌಡ/ ಶಿವರಾಮ್ ಹೆಬ್ಬಾರ್
  • ಯುವಜನ ಸೇವೆ ಮತ್ತು ಕ್ರೀಡೆ, ವಕ್ಫ್, ಹಜ್( ವಕ್ಫ್, ಹಜ್ ಶ್ರೀಮಂತ ಪಾಟೀಲ್ ಬಳಿ ಇತ್ತು)
    ಈಗ – ನಾರಾಯಣಗೌಡ,
    ಮೊದಲು – ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು
  • ಮೀನುಗಾರಿಕೆ ಮತ್ತು ಬಂದರು
    ಈಗ – ಎಸ್ ಅಂಗಾರ,
    ಮೊದಲು – ಕೋಟಾ ಶ್ರೀನಿವಾಸ್ ಪೂಜಾರಿ
  • ಹಿಂದುಳಿದ ವರ್ಗಗಳ ಕಲ್ಯಾಣ
    ಈಗ – ಕೋಟಾ ಶ್ರೀನಿವಾಸ ಪೂಜಾರಿ (ಮುಜುರಾಯಿ ಕೂಡ ಇರುತ್ತೆ)
    ಮೊದಲು – ಯಡಿಯೂರಪ್ಪ ಬಳಿ ಇತ್ತು.
Team Newsnap
Leave a Comment
Share
Published by
Team Newsnap

Recent Posts

ತಾಯಿಯ ಶವದೊಂದಿಗೆ 4 ದಿನ ಕಳೆದ ಪುತ್ರಿಯೂ ವಿಧಿವಶ

ಕುಂದಾಪುರ : ಮೇ 16 ರ ರಾತ್ರಿ ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನಿವಾಸಿ ಜಯಂತಿ ಶೆಟ್ಟಿ (61) ಅವರ ಮೃತದೇಹ… Read More

May 19, 2024

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024