February 20, 2026

Newsnap Kannada

The World at your finger tips!

election , politics , JDS

2023 ರ ಚುನಾವಣೆಗೆ ಮುಂದಿನ‌ ಸಂಕ್ರಾಂತಿಯಿಂ‌ದ ಜನರ ಮುಂದೆ ಹೋಗಲು ತಯಾರಿ – ಎಚ್ ಡಿ ಕೆ‌

Spread the love

2023 ಚುನಾವಣೆಗೆ ತಯಾರಿ ಶುರು ಮಾಡಿರುವ ಜೆಡಿಎಸ್ ನಾಯಕ, ಮಾಜಿ ಸಿ‌ಎಂ ಕುಮಾರಸ್ವಾಮಿ 2022 ಜನವರಿ 15ರಿಂದ ಜನರ ಮುಂದೆ ಹೋಗುವುದಾಗಿ ಪ್ರಕಟಿಸಿದರು. ‌

ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ನಾನು ಕಾಂಗ್ರೆಸ್ ಅವರ ರೀತಿ ಬೀದಿಗಿಳಿದು ಸ್ಟಂಟ್ ಮಾಡಲ್ಲ. ನನ್ನ ಮುಂದಿನ ಕಾರ್ಯಕ್ರಮಗಳನ್ನು ತಯಾರು ಮಾಡಿ ಜನರಿಗೆ ತಿಳಿಸುತ್ತೇನೆ. ಆದಕ್ಕಾಗಿ ಜನವರಿ 15ರಿಂದ ನಾನು ಜನರ ಮುಂದೆ ಹೋಗಲು ಸಿದ್ದ ನಾಗಿದ್ದೇನೆ ಎಂದರು.

ಮುಂದಿನ ವರ್ಷ ಸಂಕ್ರಾಂತಿಯಿಂದ ಕೊರೋನಾ ಕಡಿಮೆ ಆಗುತ್ತೆ.
ಆಗ ಇನ್ನೂ ಒಂದು ವರ್ಷ ಟೈಂ ಇರುತ್ತೆ. ಆಗ ನಾನು ಜನರ ಮುಂದೆ ಹೋಗುತ್ತೆ ಎಂದರು.

ಕಾಂಗ್ರೆಸ್ ನವರು ಚುನಾವಣೆ ಬಂತು ಅಂದಾಗ ಎಲ್ಲಾ ಕೊಡವಿಕೊಂಡು ಗರಿಗರಿ ಬಟ್ಟೆ ಹಾಕೊಂಡು ಬರುತ್ತಾರೆ.ದೊಡ್ಡ ಸಾಧನೆ ಮಾಡಿದ್ದೇನೆ ಅಂದು ಕೊಂಡಿದ್ದಾರೆ.
ನನಗೆ ಬೇಕಿರೋದು ಜನರು ನೆಮ್ಮದಿಯಿಂದ ಬದುಕುವ ಅವಕಾಶ ಕಲ್ಪಿಸುವುದು .
ಅದನ್ನು ಕೊಡುವುದಕ್ಕೆ ನನ್ನದೇ ಆದ ಕಾರ್ಯಕ್ರಮ ರೂಪಿಸಿ
ಜನರಿಗೆ ಆ ಕಾರ್ಯಕ್ರಮಗಳನ್ನು ಇಡುತ್ತೇನೆ ಎಂದು ಹೇಳಿದರು. ‌

ಈ ಹಿಂದೆ ಸಾಕಷ್ಟು ಕೆಲಸ ಮಾಡಿದ್ದಾನೆ ಎಂಬ ನಂಬಿಕೆ ಇದ್ದರೆ ಜನರು ನನಗೆ ಮತ ನೀಡುತ್ತಾರೆ ಎಂ ವಿಶ್ವಾಸವನ್ನು ವ್ಯಕ್ತಪಡಿಸಿದರು.

error: Content is protected !!