ಐಪಿಎಲ್ 20-20ಯ 37ನೇ ಪಂದ್ಯದಲ್ಲಿ ಕೆಕೆಆರ್ ತಂಡದ ವಿರುದ್ಧ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ಗಳ ಅಂತರದಿಂದ ಗೆದ್ದಿತು.
ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಕೆಕೆಆರ್ ತಂಡದಿಂದ ಆರಂಭಿಕ ಆಟಗಾರರಾಗಿ ಎಸ್. ಗಿಲ್ ಹಾಗೂ ಆರ್. ತ್ರಿಪಾಠಿ ಫೀಲ್ಡಿಗೆ ಎಂಟ್ರಿ ನೀಡಿದರು. ಆದರೆ ಕೆಕೆಆರ್ ತಂಡದ ಇಂದಿನಪ್ರದರ್ಶನ ಅತ್ಯಂತ ನೀರಸವಾಗಿತ್ತು. ಗಿಲ್ ಹಾಗೂ ತ್ರಿಪಾಠಿ ತಲಾ 1 ರನ್ಗಳಿಗೆ ಪೆವಿಲಿಯನ್ ಸೇರಿದರು. ಇವರ ನಂತರ ಬಂದ ಇ. ಮಾರ್ಗನ್ (34 ಎಸೆತಗಳಿಗರ 30 ರನ್) ಕೆ.ಯಾದವ್ (19 ಎಸೆತಗಳಿಗೆ 12ರನ್) ಎಲ್. ಫರ್ಗ್ಯುಸನ್ (16 ಎಸೆತಗಳಿಗೆ 19 ರನ್) ಗಳಿಸಿ ತಂಡವನ್ನು ಮುನ್ನಡೆಸುವ ಪ್ರಯತ್ನ ಮಾಡಿದರಾದರೂ ಆರ್ಸಿಬಿ ತಂಡದ ಬೌಲರ್ಗಳ ತಂಡ ಕೆಕೆಆರ್ನ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕಿತ್ತು. ಎಂ. ಸಿರಾಜ್ 3 ವಿಕೆಟ್ ಹಾಗೂ ವಿಜಯೇಂದ್ರ ಚಹ್ವಾಲ್ 2 ವಿಕೆಟ್ ಗಳಿಸಿ ಕೆಕೆಆರ್ ತಂಡವನ್ನು ಮಣ್ಣು ಮುಕ್ಕಿಸಿದರು. ಕೆಕೆಆರ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 84 ರನ್ಗಳ ಅತ್ಯಂತ ಸಾಧಾರಣ ಗಳಿಕೆ ಮಾಡಿತು.
ಆರ್ಸಿಬಿ ತಂಡ ಜೇವಲ 13 ಓವರ್ಗಳಲ್ಲಿ ಕೆಕೆಆರ್ ಸವಾಲನ್ನು ಗೆದ್ದಿತು. ಆರ್ಸಿಬಿ ತಂಡದಿಂದ ಆರಂಭಿಕ ಆಟಗಾರರಾಗಿ ದೇವದತ್ ಪಡಿಕ್ಕಲ್ ಹಾಗೂ ಆರೋನಾ ಫಿಂಚ್ ಮೈದಾನಕ್ಕಿಳಿದರು. ಪಡಿಕ್ಕಲ್ 17 ಎಸೆತಗಳಿಗೆ 25 ರನ್ ಹಾಗೂ ಫಿಂಚ್ 21 ಎಸೆತಗಳಿಗೆ 16 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಬಂದ ಜಿ.ಸಿಂಗ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 26 ಎಸೆತಗಳಿಗೆ 21ರನ್ ಹಾಗೂ 17 ಎಸೆತಗಳಿಗೆ 18 ರನ್ ಗಳಿಕೆ ಮಾಡಿ ತಂಡವನ್ನು ಗೆಲ್ಲಿಸಿತು. ಆರ್ಸಿಬಿ ತಂಡ 13.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 85 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಗರಿಯನ್ನು ತನ್ನದಾಗಿಸಿಕೊಂಡಿತು.
ಜನರ ಸಮಸ್ಯೆಗಳಿಗಿಂತ ಟಿವಿ ಚಾನಲ್ ಗಳಿಗೆ ಗಂಡ ಹೆಂಡ್ತಿ ಜಗಳಗಳ ಬಗ್ಗೆಯೇ ಹೆಚ್ಚು ಆಸಕ್ತಿ: ಸಿಎಂ ವ್ಯಂಗ್ಯ ಫೇಕ್ ನ್ಯೂಸ್… Read More
ಹಾಸನ: 10 ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನದ ಅಲೂರು ತಾಲೂಕಿನ ಚಿನ್ನಪುರದಲ್ಲಿ ನಡೆದಿದೆ. ಮೃತ ಬಾಲಕ ಸಚಿನ್… Read More
ಮೈಸೂರು: ಶುಕ್ರವಾರ ( 20-09-2024 ) ರಾತ್ರಿ ದಸರಾ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ… Read More
ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದ್ದು, ದೇಶದ ಜಿ ಡಿಪಿ… Read More
ಬೆಂಗಳೂರು : BMTC ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ,ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಚಾಲಕ… Read More
ಮಂಗಳೂರು : ಕಾಮಗಾರಿಯ ಬಿಲ್ ಪಾವತಿಗಾಗಿ ಲಂಚ ಸ್ವೀಕರಿಸುತ್ತಿರುವಾಗಲೇ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್ ಹಾಗೂ ಮುಖ್ಯ ಅಧಿಕಾರಿ ಲೋಕಾಯುಕ್ತ… Read More
This website uses cookies.
Leave a Comment